Advertisement

ಮೋದಿ ಮತ್ತೆ ಪ್ರಧಾನಿಯಾಗಲಿ : ರಾಯರಿಗೆ ಸಣ್ಣ ರಥೋತ್ಸವ

08:19 AM Mar 30, 2019 | Vishnu Das |

ರಾಯಚೂರು: ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿರುವ ಬೆಳಗಾವಿ ಮೂಲದ ವೃದ್ಧ ದಂಪತಿ ನರೇಂದ್ರ ಮೋದಿ ಮತ್ತೂಮ್ಮೆ ಪ್ರಧಾನಿ ಆಗಲಿ ಎಂಬ ಪ್ರಾರ್ಥಿಸಿ, ಸಣ್ಣ ಚಿನ್ನದ ರಥೋತ್ಸವ ಸೇವೆ ಮಾಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.

Advertisement

ಅವರ ಭಾವಚಿತ್ರ ಹಾಗೂ ಪೂಜೆಯ ರಸೀದಿ ಈಗ ಸಾಮಾಜಿಕ ಜಾಲತಾಣ ಗಳಲ್ಲಿ ಜೋರಾಗಿ ಹರಿದಾಡುತ್ತಿದೆ. ಮಠ ದಲ್ಲಿ ವಿವಿಧ ಪ್ರಕಾರದ ಅರ್ಚನೆಗಳಿದ್ದು, ಭಕ್ತರು ಶಕ್ತಿಯನುಸಾರ ಪೂಜೆ ಮಾಡಿಸು ತ್ತಾರೆ. ಆದರೆ, ಈ ವೃದಟಛಿ ದಂಪತಿ 7 ಸಾವಿರರೂ.ಪಾವತಿಸಿ ಸಣ್ಣ ರ ಥೋತ್ಸವ ಮಾಡಿಸಿ ದ್ದಾರೆ. ಏಕಾದಶಿ ಹೊರ ತಾಗಿ ಉಳಿದ ಯಾವುದೇ ದಿನಗಳಲ್ಲಿ ಭಕ್ತರು ರಾಯ ರಿಗೆ ಈ ಸೇವೆ ನೀಡಬ ಹುದು. ಈಚೆಗೆ ಮಠಕ್ಕೆ ಬಂದಿರುವ ಈ ದಂಪತಿ, ಮೋದಿ ಹೆಸರಲ್ಲಿ ರಥೋತ್ಸವ ಮಾಡಿದ್ದಾರೆ. ಆದರೆ, ರಸೀದಿಯಲ್ಲಿ ನರೇಂದ್ರ ಮೋದಿ ಎಂದು ಮಾತ್ರ ನಮೂದಾಗಿದೆ. ಯಾವುದೇ ಕುಲ, ಗೋತ್ರಗಳ ಉಲ್ಲೇಖ ವಿಲ್ಲ. ಈ ಬಗ್ಗೆಮಠದ  ಸಿಬ್ಬಂದಿಗೂ ಸರಿಯಾದ ಮಾಹಿತಿಯಿಲ್ಲ.

ಮಠಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಯಾರು, ಯಾವ ಸೇವೆ ನೀಡುತ್ತಾರೆ ಎಂದು ನಿಖರವಾಗಿ ಹೇಳುವುದು ಕಷ್ಟ. ಈ ದಂಪತಿ ನರೇಂದ್ರ ಮೋದಿ ಎಂದಷ್ಟೇ ಬರೆಸಿದ್ದು, ಅವರ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಅವರು ಬೆಳಗಾವಿಯವರು ಎಂಬುದನ್ನು ನಾವು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದು. ಬಹುಶ: ಆ ವೃದ್ಧ
ದಂಪತಿ ನರೇಂದ್ರ ಮೋದಿಯವರ ಅಪ್ಪಟ ಅಭಿಮಾನಿಗಳೇ ಇರಬೇಕು.
● ಶ್ರೀನಿವಾಸ, ಶ್ರೀಮಠದ ವ್ಯವಸ್ಥಾಪಕ

Advertisement

Udayavani is now on Telegram. Click here to join our channel and stay updated with the latest news.

Next