Advertisement

Shankaranarayana: ಕೃಷಿಕ ಗದ್ದೆಯಲ್ಲಿ ಕುಸಿದು ಬಿದ್ದು ಸಾವು

11:07 PM Jul 21, 2023 | Team Udayavani |

ಸಿದ್ದಾಪುರ: ಶಂಕರನಾರಾಯಣ ಗ್ರಾಮದ ತಲ್ಲಂಜೆ ಬಾಬು ಗೊಲ್ಲ(57) ಅವರು ಮನೆ ಸಮೀಪದ ಗದ್ದೆಗೆ ಕೆಲಸಕ್ಕೆಂದು ಜು.20ರಂದು ಬೆಳಗ್ಗೆ 8.30ರ ಸಮಯದಲ್ಲಿ ಹೋದವರು ಕುಸಿದು ಬಿದ್ದು ಮೃತ ಪಟ್ಟಿದ್ದಾರೆ.

Advertisement

ನೇಜಿ ಹಾಕಿದ ಗದ್ದೆಯಲ್ಲಿ ಬಾಬು ಗೊಲ್ಲ ಅವರು ಮಧ್ಯಾಹ್ನ 12.30ರ ಸಮಯದಲ್ಲಿ ಕವುಚಿ ಬಿದ್ದಿದ್ದರು. ಅವರನ್ನು ಕೂಡಲೆ ಹಾಲಾಡಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ವೈದ್ಯರು ಮೃತಪಟ್ಟಿದ್ದಾರೆ ಎಂದು ತಿಳಿಸಿದರು.

ಪತ್ನಿ ಸುಗುಣ ಅವರು ನೀಡಿರುವ ದೂರಿನ ಅನ್ವಯ ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next