Advertisement

Sangeetha Santhosha: ನವತಂಡದ ಸಂತೋಷದ ಪಯಣ

03:19 PM Oct 10, 2024 | Team Udayavani |

ಸಿನಿಮಾ ಮಾಡಬೇಕು, ಆ ಮೂಲಕ ಬಣ್ಣದ ಲೋಕದಲ್ಲಿ ಹೊಸದೇನೋ ನೀಡಬೇಕು ಎಂಬ ಆಸೆ ಒಮ್ಮೆ ಮನದಲ್ಲಿ ಮೂಡಿದರೆ ಅದು ಸದಾ ಕಾಡುತ್ತಲೇ ಇರುತ್ತದೆ. ನೀವು ಬೇರೆ ಯಾವ ಕ್ಷೇತ್ರದಲ್ಲಿ ಬಿಝಿಯಾದರೂ ಸಿನಿಮಾ ಆಸೆ ಮಾತ್ರ ನಿಮ್ಮನ್ನು ಬಿಡುವುದಿಲ್ಲ. ಇದೇ ಕನಸಿನೊಂದಿಗೆ ಸಿದ್ದು ಎಸ್‌ ಎನ್ನುವವರು ಸಿನಿಮಾವೊಂದನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಅದೇ “ಸಂತೋಷ ಸಂಗೀತ’.

Advertisement

ಈ ಚಿತ್ರ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್‌ ಬಿಡುಗಡೆಯಾಯಿತು. ಚಂದ್ರಶೇಖರ ಶಿವಾರಾಧ್ಯ ಸ್ವಾಮೀಜಿರವರು ಟ್ರೇಲರ್‌ ಬಿಡುಗಡೆ ಮಾಡಿ ಹಾರೈಸಿದರು. ಈ ಚಿತ್ರವು “ಯು’ಪ್ರಮಾಣ ಪತ್ರ ಪಡೆದಿದೆ.

ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಸಿದ್ದು, “ಸಂತೋಷ ಸಂಗೀತ ಚಿತ್ರ ನಿಲ್ಲಲು ನಾಲ್ಕು ಕಾಲು ತುಂಬಾ ಅವಶ್ಯಕತೆ ಇದ್ದು, ತಯಾರಿ, ನಟನೆ, ಎರಡು ಕಾಲದರೆ, ಜನರಿಗೆ ತಲುಪಿಸುವ ಮಾಧ್ಯಮ ಮತ್ತು ವೀಕ್ಷಕರ ಪ್ರೀತಿ ಇನ್ನೆರಡು ಕಾಲು ಆಗಿರುತ್ತದೆ. ಈ ನಾಲ್ಕು ಕಾಲು ನಿಂತರೆ ಸಿನಿಮಾ ನಿಲ್ಲುತ್ತದೆ. ನಾನು ಎಂ.ಸಿ.ಎ ಪದವೀಧರ. ಸಿನಿಮಾ ಪ್ರೇಮಿ. ಒಳ್ಳೆಯ ಸಿನಿಮಾ ನೋಡಿ, ನಾನು ಈ ರೀತಿ ಸಿನಿಮಾ ಮಾಡಬೇಕೆಂದು ಕನಸು ಕಂಡವನು. ಆ ಕನಸು ಈಗ ನನಸಾಗಿದೆ. ಎಲ್ಲರ ಸಹಕಾರದಿಂದ ಸಂತೋಷ ಸಂಗೀತ ಸಿನಿಮಾವನ್ನು ನಾನೇ ನಿರ್ಮಾಣ ಮಾಡಿ ನಿರ್ದೇಶಿಸಿದ್ದೇನೆ. ಲಾಕ್‌ ಡೌನ್‌ ಸಮಯದಲ್ಲಿ ಬರೆದ ಕಥೆ ಇದು. ಲವ್‌, ಕಾಮಿಡಿ, ಸಸ್ಪೆನ್ಸ್‌ ಹೀಗೆ ನೋಡುಗನಿಗೆ ಬೇಕಾದ ಎಲ್ಲಾ ಅಂಶಗಳು ಸಂತೋಷ ಸಂಗೀತ ಚಿತ್ರದಲ್ಲಿದೆ. ಅರ್ನವ್‌ ವಿನ್ಯಾಸ್‌ ಹಾಗೂ ರಾಣಿ ವರದ್‌ ಈ ಚಿತ್ರದ ನಾಯಕ – ನಾಯಕಿಯಾಗಿ ನಟಿಸಿದ್ದಾರೆ. ದೊಡ್ಡಣ್ಣ, ಅವಿನಾಶ್‌, ಲಯ ಕೋಕಿಲ, ಕವನ, ಅಮಿತ್‌, ಕಾಮಿಡಿ ಕಿಲಾಡಿಗಳು ಖ್ಯಾತಿಯ ಲೋಕೇಶ್‌ ಸೂರ್ಯ, ಮಡೆನೂರು ಮನು, ಹನೀಶ್‌, ನಕ್ಷತ್ರ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಸದ್ಯದಲ್ಲೇ ಚಿತ್ರ ನಿಮ್ಮ ಮುಂದೆ ಬರಲಿದೆ’ ಎಂದರು.

ಅರ್ನವ್‌ ವಿನ್ಯಾಸ್‌ ಈ ಚಿತ್ರದ ನಾಯಕ. “2017 ರಲ್ಲಿ ತೆರೆಕಂಡ ಹೊಂಬಣ್ಣ ಚಿತ್ರದ ಮೂಲಕ ಸಿನಿ ಪಯಣ ಆರಂಭಿಸಿದ ನಾನು ಆನಂತರ ಪ್ರೇಮಂ ಚಿತ್ರದಲ್ಲಿ ನಟಿಸಿದ್ದೆ. ಇದು ನನ್ನ ಮೂರನೇ ಚಿತ್ರ. ಈ ಚಿತ್ರದಲ್ಲಿ ನನ್ನದು ಉದ್ಯಮಿಯ ಪಾತ್ರ. ನಿಜ ಜೀವನದಲ್ಲೂ ಪತಿ ಪತ್ನಿಯರಾಗಿರುವ ನಾನು ಹಾಗೂ ರಾಣಿ ವರದ್‌, ತೆರೆಯ ಮೇಲೂ ಪತಿ ಪತ್ನಿಯರಾಗಿಯೇ ಕಾಣಿಸಿಕೊಂಡಿರುವುದು ವಿಶೇಷ ಎನ್ನುವುದು ಅರ್ನವ್‌ ಮಾತು. ನಾಯಕಿ ರಾಣಿ ವರದ್‌ ಕೂಡಾ ಪಾತ್ರದ ಬಗ್ಗೆ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next