Advertisement

ಸಂಗಾಪೂರ ಕೆರೆ ಹೂಳೆತ್ತಲು ಜನಸಾಮಾನ್ಯರು ಕೈಜೋಡಿಸಲು ರೈತರ ಮನವಿ

05:09 PM Jun 17, 2020 | sudhir |

ಗಂಗಾವತಿ: ಸಂಗಾಪೂರ ಪುರಾತನ ಕೆರೆ ಇದು ಪ್ರಕೃತಿ ಸೌಂದರ್ಯದ‌ ಮಧ್ಯದಲ್ಲಿದ್ದು ಇದರ‌ ಒತ್ತುವರಿ ತೆರವು, ಜೀರ್ಣೋದ್ಧಾರ ಕಾರ್ಯಕ್ಕೆ ಸಂಘ ಸಂಸ್ಥೆಯ ಮುಖಂಡರು ರೋಟರಿ ಲಯನ್ಸ್ ಕ್ಲಬ್ ಸೇರಿ ಸರ್ವರೂ ಕೈ ಜೋಡಿಸುವಂತೆ ಎಪಿಎಂಸಿ ಮಾಜಿ ನಿರ್ದೇಶಕ ತಾಳೂರಿ ಸೂರ್ಯರಾವ್ ಮನವಿ ಮಾಡಿದರು.

Advertisement

ಅವರು ಸಂಗಾಪೂರ ಕೆರೆ ಪ್ರದೇಶದಲ್ಲಿ ಚಾರಣ ತಂಡ‌ದಿಂದ ದೇಣಿಗೆ ಸ್ವೀಕರಿಸಿ ಮಾತನಾಡಿದರು.
ಕೆರೆ ಒತ್ತುವರಿ ತೆರವುಗೊಳಿಸಿ ಜೀರ್ಣೋದ್ಧಾರ ಮಾಡಲು ಜಿಲ್ಲಾಧಿಕಾರಿಗಳು ಮಾರ್ಗದರ್ಶನ ಮಾಡಿದ್ದು ಕೆರೆಯ ಫಲವತ್ತಾದ ಮಣ್ಣನ್ನು ರೈತರು ಉಚಿತ ತೆಗೆದುಕೊಂಡು ಹೋಗಿ ತಮ್ಮ ಹೊಲಗದ್ದೆಗೆ ಹಾಕಿಕೊಳ್ಳುವಂತೆ ಮನವಿ‌ ಮಾಡಿದರು.

ದೇಣಿಗೆ ವಿತರಣೆ: ಗಂಗಾವತಿ ಚಾರಣ ಬಳಗದ ಸಂಚಾಲಕ ಡಾ.ಶಿವಕುಮಾರ್ ಹಾಗು ನಗರಸಭೆ ಸದಸ್ಯ‌ ಉಮೇಶ‌ ಸಿಂಗನಾಳ ವೈಯಕ್ತಿಕವಾಗಿ 8 ಸಾವಿರ ರೂಪಾಯಿ ದೇಣಿಗೆ ವಿತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next