Advertisement

ಸಿದ್ದರಾಮಯ್ಯ ಹೇಳಿಕೆಗೆ ಮನಗೂಳಿ ಸಂಗನಬಸವಶ್ರೀ ಕಿಡಿ; ಬಹಿಷ್ಕಾರದ ಬೆದರಿಕೆ

01:16 PM Mar 26, 2022 | keerthan |

ವಿಜಯಪುರ: ಮುಖ್ಯಮಂತ್ರಿ ಆಗಿದ್ದಾಗ ರಾಜಕೀಯ ಕಾರಣಗಳಿಗೆ ವೀರಶೈವ-ಲಿಂಗಾಯತ ಎಂದು ಧರ್ಮ ಒಡೆಯುವ ಕೆಲಸ ಮಾಡಿದ್ದ ಸಿದ್ಧರಾಮಯ್ಯ ಅವರು, ಇದೀಗ ಓಲೈಕೆ ಮಾತಿನ ಭರದಲ್ಲಿ ಮಠಾಧೀಶರನ್ನು ಅವಮಾನಿಸುವ ಕೆಲಸ ಮಾಡಿದ್ದಾರೆ. ತಮ್ಮ ತಪ್ಪು ತಿದ್ದುಕೊಳ್ಳದಿದ್ದಲ್ಲಿ ಭವಿಷ್ಯದಲ್ಲಿ ಸಿದ್ದರಾಮಯ್ಯ ಅವರನ್ನು ಸ್ವಾಮಿಗಳು ಬಹಿಷ್ಕಾರ ಹಾಕಬೇಕಾದೀತು ಎಂದು ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶ್ರೀಗಳು ಕಿಡಿಕಾರಿದ್ದಾರೆ.

Advertisement

ಶನಿವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಠಾಧೀಶರು ಮಾಡುತ್ತಿರುವ ಕೆಲಸ ನಾಡಿನ ಜನತೆಗೆ ಗೊತ್ತಿದೆ. ವೀರಶೈವ ಧರ್ಮ ಒಡೆಯುವ ಕೆಲಸಕ್ಕೆ ಕೈಹಾಕಿ ಅಧಿಕಾರ ಕಳೆದುಕೊಂಡ ಸಿದ್ಧರಾಮಯ್ಯ ಅವರು ಇದೀಗ ಮಠಾಧೀಶರ ಬಗ್ಗೆ ಮಾತನಾಡಿದ್ದು ತಪ್ತು. ಭಾರತ ಹಿಂದೂಗಳಿರುವ ದೇಶ, ಹಿಂದೂ ಧರ್ಮ, ಸ್ವಾಮಿಗಳಿಗೆ ಅಪಮಾನ ಮಾಡಿದಲ್ಲಿ ಸಹಿಸಲು ಸಾಧ್ಯವಿಲ್ಲ ಎಂದರು.

ಇದನ್ನೂ ಓದಿ:ಡಬಲ್ ಎಂಜಿನ್ ಸರ್ಕಾರದಲ್ಲಿ ಡಬಲ್ ದೋಖಾ: ಪ್ರಿಯಾಂಕ್ ಖರ್ಗೆ ಆಕ್ರೋಶ

ಸದನದಲ್ಲಿ ಹಿಜಾಬ್ ವಿಷಯ ಬಂದಾಗ ಅನಗತ್ಯವಾಗಿ ಸ್ವಾಮಿಗಳ ಅವಹೇಳನ ಮಾಡಿರುವ ಸಿದ್ಧರಾಮಯ್ಯ ಅವರಿಗೆ ಮಠಾಧೀಶರು ಮಾಡುವ ಕೆಲಸದ ಅರಿವಿಲ್ಲ. ಅವರೇನು ಹಿಂದೂ ಇದ್ದಾರೋ- ಯಾರಿದ್ದಿರೋ ಎಂಬುದು ತಿಳಿಯದಾಗಿದೆ. ನಿಮಗೆ ಬೇರೆ ಸಮಾಜ ಬೇಕಿದ್ದರೆ ಮತ ಬ್ಯಾಂಕ್ ಕಾರಣಕ್ಕೆ ಅವರನ್ನು ಬೆಂಬಲಿಸಿ. ಆದರೆ ಅದರ ರಾಜಕೀಯ ಪ್ರೇರಿತವಾಗಿ ಹಿಜಾಬ್ ನೆಪದಲ್ಲಿ ಸ್ವಾಮಿಗಳನ್ನು ಅಪಮಾನಿಸುವ ಕೆಲಸ ಮಾಡಿದಲ್ಲಿ ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next