Advertisement

ಸಂಗಬೆಟ್ಟು: ಕಟ್ಟಡ ಕಾಮಗಾರಿಯ ವೇಳೆ ಲಿಂಟೆಲ್ ಕಲ್ಲು ಬಿದ್ದು ಕಾರ್ಮಿಕ ಸಾವು

01:14 PM Oct 07, 2020 | sudhir |

ಪುಂಜಾಲಕಟ್ಟೆ: ಕಟ್ಟಡ ಕಾಮಗಾರಿಯ ವೇಳೆ ಕಾರ್ಮಿಕ ನೋರ್ವನ ತಲೆಯ ಮೇಲೆ ಕಾಂಕ್ರೀಟಿಕರಣದ ಲಿಂಟಲ್ ಕಲ್ಲು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟ ಘಟನೆ  ಬಂಟ್ವಾಳ ಸಮೀಪದ ಸಂಗಬೆಟ್ಟುವಿನಲ್ಲಿ ಬುಧವಾರ  ಬೆಳಗ್ಗೆ ಸಂಭವಿಸಿದೆ.

Advertisement

ಸಿದ್ದಕಟ್ಟೆಯ ಮಂಚಕಲ್ಲು ನಿವಾಸಿ ಸೇಸಪ್ಪ ಗೌಡ ಅವರ ಪುತ್ರ ರಮಾನಂದ ಗೌಡ ( 30) ಮೃತಪಟ್ಟ ದುರ್ದೈವಿಯಾಗಿದ್ದಾರೆ. ವೃತ್ತಿಯಲ್ಲಿ ಮೇಸ್ತ್ರಿಯಾಗಿರುವ ಇವರು ಸೇಸಪ್ಪಗೌಡರ ಇಬ್ಬರ ಪುತ್ರರಲ್ಲಿ ಹಿರಿಯವನಾಗಿದ್ದು, ಅವಿವಾಹಿತರಾಗಿದ್ದಲ್ಲದೆ ಮನೆಗೂ ಆಧಾರವಾಗಿದ್ದರು.

ಸಿದ್ದಕಟ್ಟೆ ಸಮೀಪದ ಸಂಗಬೆಟ್ಟು ಎಂಬಲ್ಲಿ ನೂತನ ಮನೆ ನಿರ್ಮಾಣದ ಕಾಮಗಾರಿಯಲ್ಲಿ ನಿರತರಾಗಿದ್ದಾಗ ಆಕಸ್ಮಿಕವಾಗಿ ಮೇಲ್ಬಾಗದ ಲಿಂಟಲ್ ಕಲ್ಲು ಅಡಿಭಾಗದಲ್ಲಿದ್ದ ರಮಾನಂದ ಅವರ ತಲೆಯ ಮೇಲೆ ಬಿದ್ದಿದ್ದು,ಪರಿಣಾಮ ಗಂಭೀರಸ್ವರೂಪದ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಮೂವರು ಕಾರ್ಮಿಕರು ಈ ಮನೆ ನಿರ್ಮಾಣ ದಲ್ಲಿ ಕೆಲಸದಲ್ಲಿ ನಿರತರಾಗಿದ್ದರೆನ್ನಲಾಗಿದೆ.
ಸುದ್ದಿ ತಿಳಿದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಎಸ್.ಐ. ಪ್ರಸನ್ನ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ  ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

Advertisement

Advertisement

Udayavani is now on Telegram. Click here to join our channel and stay updated with the latest news.

Next