Advertisement

ಸಮರ್ಪಕ ಕುಡಿವ ನೀರು ಪೂರೈಸಿ

04:48 PM Jul 05, 2020 | Team Udayavani |

ಸಂಡೂರು: ಒಂದುಕಡೆ ಕೋವಿಡ್ ಭೀತಿಯಿಂದ ಸಾರ್ವಜನಿಕರು ತತ್ತರಿಸಿದ್ದರೆ ಮತ್ತೊಂದು ಕಡೆ ಡೆಂಘೀ ಆವರಿಸಿದೆ. ಮತ್ತೊಂದು ಕಡೆ ಮೂಲಭೂತವಾದ ಕುಡಿಯುವ ನೀರಿನ ಸಮಸ್ಯೆಯಿಂದ ಇಡೀ ಗೊಲ್ಲಲಿಂಗಮ್ಮನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಜನತೆ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.

Advertisement

ತಾಲೂಕಿನ ಗೊಲ್ಲಲಿಂಗಮ್ಮನಹಳ್ಳಿ ಗ್ರಾಮದಲ್ಲಿ ಕಳೆದ ಮೂರು ತಿಂಗಳಿನಿಂದಲೂ ಸಹ ಒಂದಲ್ಲ ಒಂದು ರೀತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿದೆ. ಈ ಬಗ್ಗೆ ಗ್ರಾಮಸ್ಥರು ಪಂಚಾಯಿತಿ ಅಧಿಕಾರಿಗಳಿಗೆ ನೇರವಾಗಿ ತಿಳಿಸಿದರೂ, ಸದಸ್ಯರ ಮೂಲಕ ಒತ್ತಾಯಿಸಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ.ಬೋರು ಮತ್ತು ಪೈಪ್‌ ಹಾಕುವ ಕಾಮಗಾರಿಗಳನ್ನು ಅತಿ ನಿಧಾನಗತಿಯಲ್ಲಿ ಮಾಡುತ್ತಿರುವುದು ಕುಡಿಯುವ ನೀರಿಗೂ ಸಹ ಅಲೆದಾಡುವ, ದಿನಪೂರ್ತಿ ನೀರಿಗಾಗಿ ಕಾಯುವಂತಹ ದುಸ್ಥಿತಿ ಒದಗಿ ಬಂದಿದೆ ಎಂದು ಜೈಭೀಮ ಯುವಕ ಸಂಘದ ಮುಖಂಡ ಆರ್‌. ಕೆ. ಹೆಗಡೆ ಆರೋಪಿಸಿದ್ದಾರೆ.

ಗ್ರಾಮದ ಮುಖಂಡರೆಲ್ಲರೂ ಸೇರಿ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ತಾಲೂಕುಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನೀರಿನ ವ್ಯವಸ್ಥೆ ಮಾಡಿಕೊಡಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಎ.ಕೆ. ಹುಲುಗಪ್ಪ, ರಮೇಶ್‌, ನಾಗರಾಜ, ಕುಬೇರ್‌, ರೇವಣ್ಣ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next