Advertisement

ಕೋವಿಡ್ ನಿಯಂತ್ರಣಕ್ಕೆ ಸಹಕಾರ ಅಗತ್ಯ

04:24 PM Apr 20, 2020 | Naveen |

ಸಂಡೂರು: ಪುರಸಭೆ ವ್ಯಾಪ್ತಿಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಿಬ್ಬಂದಿ ಶಕ್ತಿ ಮೀರಿ ಕಾರ್ಯನಿರ್ವಹಿಸುತ್ತಿದ್ದು ಅವರಿಗೆ ವಿವಿಧ ಸಂಘ ಸಂಸ್ಥೆಗಳ ಸಹಕಾರ ಮತ್ತು ಬೆಂಬಲ ಅತಿ ಅಗತ್ಯವಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣರಾವ್‌ ತಿಳಿಸಿದರು.

Advertisement

ಅವರು ಭಾನುವಾರ ಪಟ್ಟಣದ ಪುರಸಭೆ ಕಚೇರಿ ಸಭಾಂಗಣದಲ್ಲಿ ವಿವಿಧ ಎನ್‌ಜಿಓಗಳ ಅಧ್ಯಕ್ಷರ ಸದಸ್ಯರ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಪ್ರತಿ ಓಣಿಯಲ್ಲಿಯೂ ಪೌಡರ್‌ ಸಿಂಪಡಣೆ ಮಾಡಿದ್ದೇವೆ. ಫಾಗಿಂಗ್‌ ಮಾಡುತ್ತಿದ್ದೇವೆ ಎಂದರು. ರೈತ ಸಂಘದ ಮುಖಂಡ ಶ್ರೀಪಾದಸ್ವಾಮಿ, ಶಿವಲಿಂಗಪ್ಪ, ಕರವೇ ಅಧ್ಯಕ್ಷ ರಾಜು, ಉಜ್ಜಿನಪ್ಪ, ಬಾಬುನಾಯ್ಕ ಮತ್ತಿತರರು ಮಾತನಾಡಿದರು.

ಸಭೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಸುಳ್ಳು ಸುದ್ದಿ ಹರಡದಂತೆ ಎಲ್ಲಾ ರೀತಿಯ ಮುಂಜಾಗ್ರತೆವಹಿಸಲಾಗುವುದು ಎಂದರು, ಸಭೆಯಲ್ಲಿ ಪುರಸಭೆಯ ಅಧಿಕಾರಿಗಳಾದ ಅನ್ನಪೂರ್ಣ, ಗೀತಾ, ಮಲ್ಲೇಶಪ್ಪ, ಪ್ರಭುರಾಜ ಹಗರಿ, ಸತ್ಯನಾರಾಯಣರಾವ್‌ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next