Advertisement

ಈ ಸಲ ಕಪ್ ನಮ್ದೇ : ಆರ್‌ಸಿಬಿಗೆ ಸಾಥ್‌ ಕೊಟ್ಟ ಸ್ಯಾಂಡಲ್‌ವುಡ್‌ ಸ್ಟಾರ್ಸ್

02:14 PM Sep 21, 2020 | Suhan S |

ಇದೇ ಸೆ.19ರಿಂದ “ಐಪಿಎಲ್‌ – 2020′ ಪಂದ್ಯ ಅದ್ಧೂರಿಯಾಗಿ ಶುರುವಾಗಿದೆ. ಎಂದಿನಂತೆ ಸಿನಿಮಾ ಮಂದಿಯಲ್ಲೂಕೂಡ ಐಪಿಎಲ್‌ಕ್ರೇಜ್‌ ಜೋರಾಗುತ್ತಿದೆ. ಅನೇಕ ಭಾಷೆಗಳ ತಾರೆಯರು ಅವರವರ ನೆಚ್ಚಿನ ಐಪಿಎಲ್‌ ತಂಡಕ್ಕೆ ಸಾಥ್‌ ನೀಡುತ್ತಿದ್ದಾರೆ. ಇನ್ನು ಸ್ಯಾಂಡಲ್‌ವುಡ್‌ ತಾರೆಯರು ಕೂಡ ಎಂದಿನಂತೆ, “ಈ ಸಲ ಕಪ್‌ ನಮ್ದೇ..’ ಅಂತ ಆರ್‌ಸಿಬಿ ತಂಡಕ್ಕೆ ಸಾಥ್‌ ನೀಡುತ್ತಿದ್ದಾರೆ.

Advertisement

ಹೌದು, ಈ ಬಾರಿ ಐಪಿಎಲ್‌ ನಲ್ಲಿ ಆರ್‌ಸಿಬಿ ತಂಡವನ್ನು ಬೆಂಬಲಿಸಲು ಹೊರಟಿರುವ ಸ್ಯಾಂಡಲ್‌ವುಡ್‌ ತಾರೆಯರು ತಮ್ಮ ನೆಚ್ಚಿನ ತಂಡವನ್ನು ಬೆಂಬಲಿಸುವ ಸಲುವಾಗಿ ಹಾಡೊಂದರಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಬಹುತೇಕ ಯುವ ಪ್ರತಿಭೆಗಳೇ ಸೇರಿಕೊಂಡು ಆರ್‌ಸಿಬಿ ತಂಡಕ್ಕೆ ಶುಭ ಹಾರೈಸುವ ಮೂರು ನಿಮಿಷದ ವಿಡಿಯೋ ಹಾಡನ್ನು ಸಿದ್ದಪಡಿಸಿದ್ದಾರೆ. “ಅಣು ಅಣುವಲಿ ಆರ್‌ಸಿಬಿ..,ಕಣ ಕಣದಲಿ ಆರ್‌ಸಿಬಿ.., ಮನ ಮನದಲೂ ಆರ್‌ಸಿಬಿ…’ ಎಂದು ಪ್ರಾರಂಭವಾಗುವ ಈ ಗೀತೆಯಲ್ಲಿ ನಟರಾದ ಶ್ರೀನಿ, ಪ್ರಭು ಮುಂದ್ಕೂರ್‌, ವಿಜಯ ರಾಘವೇಂದ್ರ, ಪ್ರಣೀತಾ ಸುಭಾಷ್‌, ಅದಿತಿ ಪ್ರಭುದೇವ, ಅಮೃತಾ ಅಯ್ಯಂಗಾರ್‌, ಸಂಜನಾ ಆನಂದ್‌, ಕೆಂಡಸಂಪಿಗೆ ವಿಕ್ಕಿ ಮುಂತಾದವರು ಕಾಣಿಸಿಕೊಂಡಿದ್ದಾರೆ.

ಉಳಿದಂತೆ ಅನೇಕ ಚಿತ್ರತಂಡಗಳು,ಕಲಾವಿದರು, ತಂತ್ರಜ್ಞರು ಈ ಹಾಡಿಗೆ ಪ್ರಯೋಜಕತ್ವವನ್ನು ನೀಡಿದ್ದಾರೆ. ಅನಿರುದ್ದ ಶಾಸ್ತ್ರೀ ಸಾಹಿತ್ಯ ರಚಿಸಿ, ಸಂಗೀತ ಸಂಯೋಜಿಸಿರುವ ಈ ಗೀತೆಗೆ ಮಾಧುರಿ ಪರಶುರಾಮ್ ನೃತ್ಯ ಸಂಯೋಜಿಸಿ, ನಿರ್ದೇಶಿಸಿದ್ದಾರೆ. ಈ ಗೀತೆಗೆ ಮೈತ್ರಿ ಅಯ್ಯರ್‌, ಮಾದೇಶ್‌ ಭಾರದ್ವಾಜ್‌ ಧ್ವನಿಯಾಗಿದ್ದಾರೆ. ಈ ಹಾಡಿಗೆ ಉದಯ ಲೀಲಾ ಛಾಯಾಗ್ರಹಣ, ಸಾಗರ್‌ ಮಹದೇವ್‌ ಸಂಕಲನಕಾರ್ಯ ಮಾಡಿದ್ದಾರೆ. ವಿಧಾನಸೌಧ ಸೇರಿದಂತೆ ಬೆಂಗಳೂರು ಸುತ್ತಮುತ್ತಲಿನ ಸುಂದರ ತಾಣಗಳನ್ನು ಈ ಗೀತೆಯಲ್ಲಿ ಚಿತ್ರೀಕರಿಸಲಾಗಿದೆ. ಸದ್ಯ ಸೋಶಿಯಲ್‌ ಮೀಡಿಯಾಗಳಲ್ಲಿ ಜೋರಾಗಿ ಹರಿದಾಡುತ್ತಿರುವ ಈ ಗೀತೆಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಸಲಗ ಸಪೋರ್ಟ್‌ : ಇನ್ನು ಮೊದಲಿನಿಂದಲೂ ಆರ್‌ಸಿಬಿ ಬೆಂಬಲಿಸುತ್ತ ಬಂದಿರುವ “ಸಲಗ’ ಚಿತ್ರತಂಡ, ಈಗ ಆರ್‌ಸಿಬಿ ತಂಡವನ್ನು ಸಪೋರ್ಟ್‌ ಮಾಡುವ ಸಲುವಾಗಿಯೇ ಚಿತ್ರದ ಪವರ್‌ ಪ್ಲೇ ಕ್ಲಿಪ್‌ ಬಿಡುಗಡೆ ಮಾಡುತ್ತಿದೆ. ಸೆ. 21 ರಂದು  ಎ2 ಮ್ಯೂಸಿಕ್‌ ಯು-ಟ್ಯೂಬ್‌ ಚಾನೆಲ್‌ನಲ್ಲಿ ಈ ಹಾಡು ಬಿಡುಗಡೆಯಾಗುತ್ತಿದೆ. “ನಾವು ಮೊದಲಿ ನಿಂದಲೂ ಐಪಿಎಲ್‌ ನಲ್ಲಿ ಬೆಂಗಳೂರು ತಂಡವನ್ನು ಸಪೋರ್ಟ್‌ ಮಾಡುತ್ತ ಬಂದಿದ್ದೇವೆ. ಈ ಬಾರಿ ಕೂಡ ಐಪಿಎಲ್‌ನಲ್ಲಿ ನಮ್ಮ ಸಪೋರ್ಟ್‌ ಆರ್‌ಸಿಬಿಗೆ ಇರುತ್ತದೆ. ಈ ಸಾರಿ ಆರ್‌ಸಿಬಿ ಕಪ್‌ ಗೆಲ್ಲುತ್ತದೆ ಎಂಬ ವಿಶ್ವಾಸದಲ್ಲಿದ್ದೇವೆ. ಅದಕ್ಕಾಗಿ ಆರ್‌ಸಿಬಿಗೆ ಮತ್ತು ಅದರಲ್ಲಿ ಆಡುತ್ತಿರುವ ಕನ್ನಡದ ಪ್ರತಿಭೆಗಳಿಗೆ ಸಪೋರ್ಟ್‌ ಮಾಡುವ ಸಲುವಾಗಿ ನಮ್ಮ ಚಿತ್ರತಂಡದ ಕಡೆಯಿಂದ ಪವರ್‌ ಪ್ಲೇ ಕ್ಲಿಪ್‌ ರಿಲೀಸ್‌ ಮಾಡುತ್ತಿದ್ದೇವೆ’ ಎನ್ನುತ್ತಾರೆ “ಸಲಗ’ ಚಿತ್ರದ ನಿರ್ಮಾಪಕ ಕೆ.ಪಿ ಶ್ರೀಕಾಂತ್‌

Advertisement

Udayavani is now on Telegram. Click here to join our channel and stay updated with the latest news.

Next