Advertisement

Sandalwood: ʼಭೈರವನ ಕೊನೆ ಪಾಠʼ ಕೇಳೋಕೆ ರೆಡಿಯಾಗಿ ಎಂದ ಹೇಮಂತ್‌ – ಶಿವಣ್ಣ

11:19 AM Jul 04, 2024 | Team Udayavani |

ಬೆಂಗಳೂರು: ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ – ಹೇಮಂತ್‌ ರಾವ್‌ ಕಾಂಬಿನೇಷನ್‌ ನಲ್ಲಿ ಮೂಡಿಬರಲಿರುವ ಚಿತ್ರಕ್ಕೆ ಫಿಕ್ಸ್‌ ಮಾಡಲಾಗಿದೆ.

Advertisement

ಈಗಾಗಲೇ ಸ್ಯಾಂಡಲ್‌ ವುಡ್‌ನಲ್ಲಿ ʼಕವಲುದಾರಿʼ, “ಗೋಧಿ ಬಣ್ಣ ಸಾಧಾರಣ ಮೈಕಟ್ಟು’, “ಸಪ್ತಸಾಗರದಾಚೆ ಎಲ್ಲೋ(ಸೈಡ್‌ ಎ,ಬಿ) ಚಿತ್ರಗಳನ್ನು ಭರವಸೆಯ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಹೇಮಂತ್‌ ರಾವ್‌ ಮಾಸ್‌ ಹೀರೋ ಶಿವಣ್ಣ ಅವರಿಗೆ ಆ್ಯಕ್ಷನ್ ಕಟ್ ಹೇಳುತ್ತಿರುವುದರಿಂದ ಈ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಾಗಿದೆ.

ಪ್ರೀ ಪ್ರೊಡಕ್ಷನ್‌ನಲ್ಲಿ ಬಿಝಿಯಾಗಿರುವ ನಡುವೆಯೇ ಚಿತ್ರತಂಡ ಸಿನಿಮಾದ ಟೈಟಲ್‌ ರಿವೀಲ್‌ ಮಾಡಿ ಕುತೂಹಲವನ್ನು ಹೆಚ್ಚಿಸಿದೆ.

ಕ್ಲಾಸ್‌ ಸಿನಿಮಾಗಳನ್ನು ಮಾಡಿ ಸೈ ಎನ್ನಿಸಿಕೊಂಡಿರುವ ಹೇಮಂತ್‌ ರಾವ್‌ ಇದೀಗ  ಹೊಸ ಬಗೆಯ ಸಿನಿಮಾದತ್ತ ಮುಖ ಮಾಡಲಿದ್ದಾರೆ.

ಸಿನಿಮಾಕ್ಕೆ “ಭೈರವನ ಕೊನೆ ಪಾಠʼ ಎನ್ನುವ ವಿಭಿನ್ನ ಟೈಟಲ್‌ ನ್ನು ಇಡಲಾಗಿದೆ. ಟೈಟಲ್‌ ನಿಂದಲೇ ಚಿತ್ರದ ಬಗ್ಗೆ ಹೇಮಂತ್‌ ರಾವ್‌ ಕುತೂಹಲವನ್ನು ಹೆಚ್ಚಿಸಿದ್ದಾರೆ. “ಅತ್ಯಂತ ಮುಖ್ಯವಾದ ಪಾಠವನ್ನು ಇನ್ನೂ ಕಲಿಸಬೇಕಾಗಿದೆ” ಎನ್ನುವ ಕ್ಯಾಪ್ಷನ್‌ ನ್ನು ನೀಡಲಾಗಿದೆ.

Advertisement

ವೈಶಾಖ್‌ ಗೌಡ ಎನ್ನುವವರು “ವಿಜೆ ಫಿಲಂಸ್‌’ ಮೂಲಕ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿರುವ ವೈಶಾಖ್‌ ಮೊದಲ ಬಾರಿಗೆ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸೆಪ್ಟೆಂಬರ್‌ ನಂತರ ಸಿನಿಮಾ ಚಿತ್ರೀಕರಣ ಶುರುವಾಗಲಿದೆ. ಅಂದಹಾಗೆ, ಸೌತ್‌ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿರುವ ಸಿನಿಮಾ. ಕನ್ನಡದ ಜೊತೆಗೆ ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಈ ಚಿತ್ರ ಮೂಡಿಬರುತ್ತಿದೆ.

 

Advertisement

Udayavani is now on Telegram. Click here to join our channel and stay updated with the latest news.

Next