Advertisement

ಕೋವಿಡ್-19 ವೈರಾಣು ಹರಡದಂತೆ ಬೀದಿಗಳಲ್ಲಿ ರಾಸಾಯನಿಕ ಸಿಂಪಡಿಸಿದ ನಟ ವಿನೋದ್ ರಾಜ್

01:30 PM Mar 31, 2020 | Mithun PG |

ಬೆಂಗಳೂರು: ಕೋವಿಡ್-19 ವೈರಾಣು ಹರಡದಂತೆ ಮುನ್ನೆಚ್ಚರಿಕೆಯಾಗಿ ನಟ ವಿನೋದ್ ರಾಜ್ ಅವರು ಸೋಲದೇವನಹಳ್ಳಿಯಲ್ಲಿ ಗ್ರಾಮದ ರಸ್ತೆ ಹಾಗೂ ಚರಂಡಿ ಬದಿಗಳಲ್ಲಿ ರಾಸಾಯನಿಕ ಸಿಂಪಡಣೆ ಮಾಡಿದ್ದಾರೆ. ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿ ವಿನೋದ್ ರಾಜ್ ಇಂತಹದೊಂದು ಕಾರ್ಯಕ್ಕೆ ಕೈ ಹಾಕಿದ್ದು, ಆ ಮೂಲಕ ಜನರ ಸುರಕ್ಷತೆಗೆ ಮುಂದಾಗಿದ್ದಾರೆ.

Advertisement

ತೋಟದಲ್ಲಿ ಬಳಸುವ ಟ್ರ್ಯಾಕ್ಟರ್ ಹಾಗೂ ಪಂಪ್ ಸಹಾಯದಿಂದ ಕ್ರಿಮಿನಾಶಕ ಸಿಂಪಡಣೆಯನ್ನು ಖುದ್ದು ವಿನೋದ್ ರಾಜ್ ಅವರು ಮಾಡಿದ್ದು, ಮಗನ ಸಾಮಾಜಿಕ ಕಳಕಳಿಗೆ ಹಿರಿಯ ನಟಿ ಡಾ.ಲೀಲಾವತಿ ಅವರು ಕೂಡ ಕೈ ಜೋಡಿಸಿದ್ದಾರೆ.

ಎಲ್ಲೆಡೆ ಕೊರೋನಾ ಕಂಟಕ ಆವರಿಸಿದೆ. ಈಗಾಗಲೇ ಈ ವೈರಾಣು ಹರಡದಂತೆ ಮುನ್ನೆಚರಿಕೆಯಾಗಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇತ್ತ ನಗರಗಳಲ್ಲಿ ಕಟ್ಟುನಿಟ್ಟಿನ ಲಾಕ್​ಡೌನ್ ಮೂಲಕ ಸೋಂಕು ಹರಡದಂತೆ ಜನರನ್ನು ನಿಯಂತ್ರಿಸಲಾಗುತ್ತಿದೆ.

ಸರ್ಕಾರ ತೆಗೆದುಕೊಂಡ ಮುನ್ನಚೆರಿಕೆಯ ಕ್ರಮಗಳನ್ನು ಯಾರೂ ಮೀರಬೇಡಿ. ಸರ್ಕಾರದ ಆದೇಶದಂತೆ ಮನೆಯಲ್ಲೇ ಇರಿ. ನಿಮ್ಮ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಮಾಸ್ಕ್ ಧರಿಸಿ ಸುರಕ್ಷತೆ ಕಾಪಾಡಿ ಎಂದು ನಟಿ ಲೀಲಾವತಿ ಅವರು ಮನವಿ ಮಾಡಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next