Advertisement

Sandalwood: ಪ್ರಜ್ವಲ್‌ ಕರಾವಳಿ ಚಿತ್ರ ಶುರು

04:49 PM Mar 03, 2024 | Team Udayavani |

ನಟ ಪ್ರಜ್ವಲ್‌ ದೇವರಾಜ್‌ ನಾಯಕ ನಟನಾಗಿ ಅಭಿನಯಿಸುತ್ತಿರುವ “ಕರಾವಳಿ’ ಸಿನಿಮಾದ ಚಿತ್ರೀಕರಣಕ್ಕೆ ಇತ್ತೀಚೆಗೆ ಮುಹೂರ್ತ ನೆರವೇರಿತು.

Advertisement

“ಕರಾವಳಿ’ ಸಿನಿಮಾದಲ್ಲಿ ನಾಯಕ ಪ್ರಜ್ವಲ್‌ ದೇವರಾಜ್‌ ಅವರಿಗೆ ಸಂಪದ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ನಟರಾದ ಮಿತ್ರ, ಶ್ರೀಧರ್‌, ವಿದ್ಯಾಮೂರ್ತಿ, ನಿರಂಜನ್‌ ಮತ್ತಿತರರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

“ಗಾಣಿಗ ಫಿಲಂಸ್‌’ ಹಾಗೂ “ವಿಕೆ ಫಿಲಂ ಅಸೋಸಿಯೇಷನ್‌’ ಬ್ಯಾನರ್‌ನಲ್ಲಿ ಜಂಟಿಯಾಗಿ ನಿರ್ಮಾಣವಾಗುತ್ತಿರುವ “ಕರಾವಳಿ’ ಸಿನಿಮಾಕ್ಕೆ ಗುರುದತ್‌ ಗಾಣಿಗ ನಿರ್ದೇಶನ ಮಾಡುತ್ತಿದ್ದಾರೆ.

“ಕರಾವಳಿ’ ಸಿನಿಮಾದ ಮುಹೂರ್ತದ ಬಳಿಕ ಮಾತನಾಡಿದ ನಿರ್ದೇಶಕ ಗುರುದತ್‌ ಗಾಣಿಗ, “ಇದು ಮನುಷ್ಯ ಹಾಗೂ ಪ್ರಾಣಿಯ ಮಧ್ಯೆ ನಡೆಯುವ ಸಂಘರ್ಷದ ಕಥೆ. ಹಳ್ಳಿಯ ಹಿನ್ನೆಲೆ ಮತ್ತು ಕಂಬಳದ ಸುತ್ತ ಸಿನಿಮಾ ಸಾಗುತ್ತದೆ’ ಎಂದು ಕಥಾಹಂದರ ಬಿಚ್ಚಿಡುವುದರ ಜೊತೆಗೆ ಚಿತ್ರೀಕರಣಕ್ಕೆ ಮಾಡಿಕೊಂಡಿರುವ ತಯಾರಿ ಬಗ್ಗೆ ಮಾಹಿತಿ ನೀಡಿದರು. ನಟ ಪ್ರಜ್ವಲ್‌ ದೇವರಾಜ್‌ ಮಾತನಾಡಿ, ಕೋಣದ ಜೊತೆಗಿನ ಶೂಟಿಂಗ್‌ ಅನುಭವ ಬಿಚ್ಚಿಟ್ಟರು.

“ಕೋಣ ನೋಡೋಕೆ ಮಾತ್ರ ಭಯ ಆದರೆ ತುಂಬಾ ಸಾಫ್ಟ್ ಆಗಿದೆ. “ಕರಾವಳಿ’ ಸಿನಿಮಾದ ಟೀಸರ್‌ ನೋಡಿ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಕಥೆ ತುಂಬಾ ಚೆನ್ನಾಗಿದೆ. ನನಗೆ ತುಂಬಾ ಇಷ್ಟವಾಗಿದೆ. ಇದು ನನ್ನ 40 ನೇ ಸಿನಿಮಾ. “ಕರಾವಳಿ’ ನನ್ನ ಫ್ಯಾನ್ಸಿಗೆ ತುಂಬಾ ಇಷ್ಟ ಆಗುತ್ತದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

Advertisement

ನಾಯಕಿ ಸಂಪದ “ಕರಾವಳಿ’ ಸಿನಿಮಾದಲ್ಲಿ ಪಶುವೈದ್ಯೆಯ ಪಾತ್ರದಲ್ಲಿ ಕಾಣಿಸಿಕೊಳ್ಳು ತ್ತಿದ್ದು, ತಮ್ಮ ಪಾತ್ರದ ಬಗ್ಗೆ ನಿರೀಕ್ಷೆಯ ಮಾತುಗಳನ್ನಾಡಿದರು. ಇನ್ನು “ಕರಾವಳಿ’ ಸಿನಿಮಾಕ್ಕೆ ಅಭಿಮನ್ಯು ಸದಾನಂದ್‌ ಛಾಯಾಗ್ರಹಣ, ಸಚಿನ್‌ ಬಸ್ರೂರು ಸಂಗೀತ ಸಂಯೋಜಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next