Advertisement

ಸಿಡಬ್ಲ್ಯುಸಿ ಸಭೆಯ ಪಾವಿತ್ರ್ಯವನ್ನು ಎಲ್ಲರೂ ಗೌರವಿಸಬೇಕು: ಕಾಂಗ್ರೆಸ್‌

09:56 AM May 28, 2019 | Sathish malya |

ಹೊಸದಿಲ್ಲಿ : ಕಳೆದ ಮೇ 25ರ ಶನಿವಾರ ನಡೆದಿದ್ದ ಸಿಡಬ್ಲ್ಯುಸಿ ಸಭೆಯ ಪಾವಿತ್ರ್ಯವನ್ನು ಎಲ್ಲರೂ ಗೌರವಿಸಬೇಕು ಎಂದು ಹೇಳಿರುವ ಕಾಂಗ್ರೆಸ್‌, ಮಾಧ್ಯಮದವರು ಯಾವುದೇ ಬಗೆಯ ಗಾಸಿಪ್‌, ದ್ವಂದ್ವ, ಪೂರ್ವಗ್ರಹದ ಅಭಿಪ್ರಾಯಗಳಿಗೆ ಮನ್ನಣೆ ನೀಡಬಾರದು ಎಂದು ಇಂದು ಸೋಮವಾರ ಹೇಳಿದೆ.

Advertisement

ಸಿಡಬ್ಲ್ಯುಸಿ ಸಭೆಯು ಒಂದು ಪ್ರಜಾಸತ್ತಾತ್ಮಕ ವೇದಿಕೆ; ಅದು ಮುಚ್ಚಿದ ಬಾಗಿಲುಗಳ ಹಿಂದೆ ನಡೆದಿರಬಹುದು; ಆದರೆ ಅಲ್ಲಿ ಚಿಂತನೆ ಮತ್ತು ಆಲೋಚನೆಗಳ ಅಭಿವ್ಯಕ್ತಿ ಮತ್ತು ವಿನಿಮಯ ನಡೆಯುತ್ತದೆ. ಅಲ್ಲಿನ ಯಾವುದೇ ವಿಷಯಗಳ ಬಗ್ಗೆ ಊಹೆಗಳನ್ನು ವ್ಯಕ್ತಪಡಿಸುವುದು ಅನಪೇಕ್ಷಿತ ಎಂದು ಕಾಂಗ್ರೆಸ್‌ ಮುಖ್ಯ ವಕ್ತಾರ ರಣದೀಪ್‌ ಸುರ್‌ಜೇವಾಲ ಹೇಳಿದರು.

ಕಾಂಗ್ರೆಸ್‌ ಪಕ್ಷದ ನೀತಿ ನಿರ್ಧಾರಗಳನ್ನು ಕೈಗೊಳ್ಳುವ, ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಉನ್ನತ ವೇದಿಕೆ ಸಿಡಬ್ಲ್ಯುಸಿ ಆಗಿದೆ ಎಂದವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next