Advertisement
ಪೂರ್ವ ಮುಂಗಾರಿಗೂ ಮುಂಚೆ ಬೆಳೆದ ಈರುಳ್ಳಿ ಬೆಲದ ಇಲ್ಲದೆ ಅನೇಕ ರೈತರು ಈರುಳ್ಳಿಯನ್ನು ಕೀಳದೆ ಭೂಮಿಯಲ್ಲಿಯೇ ಬಿಟ್ಟರು. ಇದೀಗ ಮತ್ತೆ ಮುಂದೆ ಬೆಲೆಸಿಗಬಹುದು ಎಂದು ಮುಂಗಾರು ಆರಂಭವಾ ಗುತ್ತಿದ್ದಂತೆ ಈರುಳ್ಳಿಯನ್ನು ಬಿತ್ತನೆ ಮಾಡಿದ್ದ ರೈತರಿಗೆ ಬೆಳೆ ಬರುವ ಹಂತದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ದೇವರಹಳ್ಳಿ, ಹಂಗಳ, ಗೋಪಾಲಪುರ ಮೊದಲಾದ ಗ್ರಾಮದಲ್ಲಿ ಈರುಳ್ಳಿ ಬೆಳೆ ಕೊಳೆತಿದೆ.
Related Articles
Advertisement
ಸಾಲ ಮಾಡಿ ಈರುಳ್ಳಿ ಬೆಳೆ ಬೆಳೆಯಲಾಗಿತ್ತು. ಇದೀಗ ನಿರಂತರ ಮಳೆಯಾಗುತ್ತಿರುವ ಕಾರಣ ಜಮೀನಿನಲ್ಲೆ ಕೊಳೆಯುತ್ತಿದೆ. ಇದರಿಂದ ನಷ್ಟದ ಭೀತಿ ಎದುರಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಇಲ್ಲದಿದ್ದರೆ ಸಮಸ್ಯೆಯ ಸುಳಿಯಲ್ಲಿ ಸಿಲುಕಬೇಕಾಗುತ್ತದೆ.● ಮಂಜುನಾಥ್, ಈರುಳ್ಳಿ ಬೆಳೆದ ರೈತ ಕೇಂದ್ರ ಸರ್ಕಾರದ ಎಸ್ಡಿಆರ್ಎಫ್ ಹಾಗೂ ಎನ್ಡಿಆರ್ಎಫ್ ಅಡಿಯಲ್ಲಿ ಪರಿಹಾರಕ್ಕೆ ಅವಕಾಶವಿದ್ದು, ಕಂದಾಯ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಜಂಟಿಯಾಗಿ ಪರಿಶೀಲನೆ ಮಾಡಿ ವರದಿ ಸಲ್ಲಿಸಿದರೆ ಒಂದು ಎಕರೆಗೆ 5400 ರೂ. ಪರಿಹಾರ ನೀಡಬಹುದು. ಗುರುವಾರದಿಂದಲೇ ರೈತ ಜಮೀನುಗಳಲ್ಲಿ ಸ್ಥಳ ಪರಿಶೀಲನೆ ಮಾಡಿ ಪರಿಹಾರಕ್ಕೆ ಶಿಫಾರಸು ಮಾಡಲಾಗುವುದು.
● ರಾಜು, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ, ಗುಂಡ್ಲುಪೇಟೆ ●ಬಸವರಾಜು ಎಸ್.ಹಂಗಳ