Advertisement

ಅಹಮದಾಬಾದ್‌ ಸರಣಿ ಸ್ಫೋಟ ಪ್ರಕರಣ: ಅಪರಾಧಿಗಳ ಜತೆ ಎಸ್‌ಪಿ ಸಂಬಂಧ: ಅನುರಾಗ್‌ ಠಾಕೂರ್‌

10:55 PM Feb 19, 2022 | Team Udayavani |

ನವದೆಹಲಿ: ಅಹಮದಾಬಾದ್‌ ಸರಣಿ ಸ್ಫೋಟ ಪ್ರಕರಣದ ದೋಷಿಗಳೊಂದಿಗೆ ಅಖಿಲೇಶ್ ಯಾದವ್‌ ಅವರ ಸಮಾಜವಾದಿ ಪಕ್ಷ ಸಂಪರ್ಕದಲ್ಲಿದೆ ಎಂದು ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಆರೋಪಿಸಿದ್ದಾರೆ.

Advertisement

ನವದೆಹಲಿಯಲ್ಲಿ ಶನಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅನುರಾಗ್‌ ಠಾಕೂರ್‌, ಸ್ಫೋಟದ ದೋಷಿಯೊಬ್ಬನ ತಂದೆಯ ಜೊತೆ ಅಖಿಲೇಶ್ ಯಾದವ್‌ ಇರುವ ಫೋಟೋವನ್ನೂ ಮಾಧ್ಯಮದೆದುರು ತೋರಿಸಿದ್ದಾರೆ.

“ಬಿಜೆಪಿ ಯಾವಾಗಲೂ ಭಯೋತ್ಪಾದನೆಯನ್ನು ವಿರೋಧಿಸುತ್ತದೆ. ಆದರೆ ಎಸ್‌ಪಿ ಅದನ್ನು ಪೋಷಿಸುತ್ತದೆ. ಬಾಯಲ್ಲಿ ಮಾತ್ರ ರಾಮನ ಜಪ ಮಾಡುವ ಎಸ್‌ಪಿ ಭಯೋತ್ಪಾದಕರ ಪರವಾಗಿದೆ. ಅದು ಸಮಾಜವಾದಿಯಲ್ಲ ಸಮಾಜವಿರೋಧಿ ಪಕ್ಷ’ ಎಂದು ಅವರು ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next