Advertisement

Janardhana Reddy: ಅಯೋಗ್ಯ ಜನಾರ್ದನ ರೆಡ್ಡಿ ಕ್ಷಮೆಯಾಚಿಸಲಿ; ಸಲೀಂ ಅಹ್ಮದ್‌

09:08 PM Jun 20, 2024 | Team Udayavani |

ಹುಬ್ಬಳ್ಳಿ: ತೈಲಬೆಲೆ ಹೆಚ್ಚಳ ಕುರಿತ ಹೋರಾಟದಲ್ಲಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಸಿಎಂ ಸಿದ್ದರಾಮಯ್ಯ ಕುರಿತು ಕೀಳು ಪದ ಬಳಕೆ ಮಾಡಿದ್ದು ಖಂಡನೀಯ. ಅಯೋಗ್ಯ ರೆಡ್ಡಿ ಕೂಡಲೇ ಕ್ಷಮೆ ಯಾಚಿಸಬೇಕೆಂದು ವಿಧಾನ ಪರಿಷತ್‌ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್‌ ಆಗ್ರಹಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತೈಲ ಬೆಲೆ ಹೆಚ್ಚಳ ಬಗ್ಗೆ ಬಿಜೆಪಿಯವರು ಪ್ರಜಾಸತ್ತಾತ್ಮಕವಾಗಿ ಪ್ರತಿಭಟಿಸಲಿ. ಆದರೆ, ಸಿಎಂ ಬಗ್ಗೆ ಕೆಟ್ಟ ಪದ ಬಳಕೆ ಸರಿಯಲ್ಲ. ತೈಲ ಬೆಲೆ ಹೆಚ್ಚಳ ಬಗ್ಗೆ ಬೀದಿಗಿಳಿದು ಹೋರಾಟ ಮಾಡುತ್ತಿರುವ ಬಿಜೆಪಿಯವರಿಗೆ ನಾಚಿಕೆಯಾಗಬೇಕು. ಮೋದಿ ಆಡಳಿತದಲ್ಲಿ ತೈಲ ಹಾಗೂ ಅಡುಗೆ ಅನಿಲ ಬೆಲೆ ವಿಪರೀತ ಹೆಚ್ಚಳ ಮಾಡಿದ್ದನ್ನು ಅವರು ನೆನಪಿಸಿಕೊಳ್ಳಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next