Advertisement

Sakrebailu: ಪ್ರಿ ವೆಡ್ಡಿಂಗ್ ಶೂಟ್ ವೇಳೆ ಆನೆ ಮೇಲಿಂದ ಬಿದ್ದ ಮಾವುತ

11:51 AM Dec 02, 2023 | keerthan |

ಶಿವಮೊಗ್ಗ: ತಾಲೂಕಿನ ಸಕ್ರೆಬೈಲು ಆನೆ ಬಿಡಾರದಲ್ಲಿ ಆನೆಯ ಮೇಲಿಂದ ಮಾವುತ ಕೆಳಗೆ ಬಿದ್ದ ಘಟನೆ ನಡೆದಿದೆ.

Advertisement

ಆನೆ ಬಿಡಾರದಲ್ಲಿ ಪ್ರಿ ವೆಡ್ಡಿಂಗ್ ಶೂಟ್ ವೇಳೆ ಘಟನೆ ನಡೆದಿದ್ದು, ಆನೆಯ ಮೇಲಿಂದ ಆಯತಪ್ಪಿ ಬಿದ್ದಿರುವ ಮಾವುತ ಷಂಶುದ್ದೀನ್ ಗಾಯಗೊಂಡಿದ್ದಾರೆ.

ಬಿಡಾರದಲ್ಲಿ ಪ್ರಿ ವೆಡ್ಡಿಂಗ್ ಶೂಟ್ ನಡೆಯುತ್ತಿತ್ತು. ಈ ವೇಳೆ ಕುಂತಿ ಆನೆ ಮೇಲೆ ಮಾವುತ ಷಂಶುದ್ದೀನ್ ಕುಳಿತಿದ್ದರು. ಈ ವೇಳೆ ಅಲ್ಲೇ ದೂರದಲ್ಲಿದ್ದ ಮರಿಯಾನೆ ತಾಯಿಯತ್ತ ಓಡಿ ಬಂತು, ಈ ವೇಳೆ ಕುಂತು ಆನೆ ವಿಚಲಿತಗೊಂಡು ತಿರುಗಿತು. ಈ ವೇಳೆ ಆನೆ ಮೇಲಿಂದ ಮಾವುತ ಆಯತಪ್ಪಿ ಬಿದ್ದಿದ್ದಾರೆ.

ಮಾವುತ ಬೀಳುತ್ತಿದ್ದಂತೆ ಫೊಟೋ ಶೂಟ್ ನಲ್ಲಿದ್ದ ಯುವಕ- ಯುವತಿ ಸೇರಿ ಅಲ್ಲಿದ್ದವರು ಗಾಬರಿಗೊಂಡರು. ಈ ಘಟನೆಯಿಂದ ಬಿಡಾರದಲ್ಲಿ ಕೆಲಹೊತ್ತು ಗೊಂದಲ ಭಯದ ವಾತಾವರಣ‌ ಉಂಟಾಯಿತು.

ಇದನ್ನೂ ಓದಿ:Tamil Nadu: 20 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿ ಬಂಧನ

Advertisement

ಆಸ್ಪತ್ರೆಗೆ ದಾಖಲು: ಆನೆ ಮೇಲಿನಿಂದ ಬಿದ್ದ ಮಾವುತನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಮಾವುತ ಷಂಶುದ್ದೀನ್ ಕೈ ಮೂಳೆಯ ಭಾಗಕ್ಕೆ ಪೆಟ್ಟಾಗಿದ್ದು, ಎರಡು ದಿನದ ಬಳಿಕ ಕೈ ಮೂಳೆ ಆಪರೇಶನ್ ಗೆ ವೈದ್ಯರು ನಿರ್ಧರಿಸಿದ್ದಾರೆ. ವನ್ಯಜೀವಿ ವಿಭಾಗದ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ, ಮಾವುತನ ಆರೋಗ್ಯ ವಿಚಾರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next