Advertisement

ಕಾಡಾನೆ ದಾಳಿ: ಸಕ್ರೆಬೈಲು ಬಿಡಾರದ ‘ರಂಗ’ ಆನೆ ಸಾವು

02:31 PM Oct 24, 2020 | keerthan |

ಶಿವಮೊಗ್ಗ: ಕಾಡಾನೆ ದಾಳಿಗೆ ಸಕ್ರೆಬೈಲು ಆನೆ ಬಿಡಾರದ ಅತ್ಯಂತ ಆಕರ್ಷಣೆಯ ಆನೆ ‘ರಂಗ’ ಸಾವನ್ನಪ್ಪಿದೆ.

Advertisement

ತನ್ನ ಮೈಕಟ್ಟಿನಿಂದಲೇ ಎಲ್ಲರನ್ನೂ ಆಕರ್ಷಿಸಿದ್ದ 35 ವರ್ಷದ ಆನೆ ರಂಗ ಕಳೆದ ರಾತ್ರಿ ನಡೆದ ಕಾಡಾನೆ ಜೊತೆಗಿನ ಕಾಳಗದಲ್ಲಿ ಸಾವನ್ನಪ್ಪಿದೆ.

ಆನೆ ಶಿಬಿರದಲ್ಲಿ ರಂಗ ಆನೆಯನ್ನು ಸರಪಳಿಯಲ್ಲಿ ಕಟ್ಟಿಹಾಕಲಾಗಿತ್ತು. ಕಳೆದ ರಾತ್ರಿ ಕಾಡಾನೆಯೊಂದು ಶಿಬಿರಕ್ಕೆ ಏಕಾಏಕಿ ದಾಳಿ ಮಾಡಿದ್ದು, ರಂಗ ಆನೆಯ ಮೇಲೆರಗಿದೆ. ಸರಪಳಿಯಲ್ಲಿ ಭಂದಿಯಾಗಿದ್ದ ರಂಗ ಅಸಹಾಯಕನಾಗಿ ಕಾಡಾನೆಯ ದಂತ ತಿವಿತಕ್ಕೆ ಬಲಿಯಾಗಿದ್ದಾನೆ.

ರಂಗ ಸಕ್ರೆಬೈಲು ಕ್ಯಾಂಪ್ ನಲ್ಲಿ ಹುಟ್ಟಿದ್ದ. ಇಲ್ಲಿನ ಗೀತಾ ಆನೆಯ ಮರಿಯಾಗಿದ್ದ ರಂಗ ನಂತರ ತನ್ನ ಮೈಕಟ್ಟಿನಿಂದಲೇ ಎಲ್ಲರ ಗಮನ ಸೆಳೆಯುತ್ತಿದ್ದ.

Advertisement

ಸ್ಥಳಕ್ಕೆ ಅರಣ್ಯಾಧಿಕಾರಿ ಮತ್ತು ವೈದರ ತಂಡ ದೌಡಾಯಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next