Advertisement

Sakleshpura; ಗುಂಪಿನಿಂದ ಬೇರ್ಪಟ್ಟು ನಿತ್ರಾಣಗೊಂಡ ಕಾಡಾನೆ ಕಾಂತಿ ಸಾವು

03:25 PM Jul 01, 2023 | Team Udayavani |

ಸಕಲೇಶಪುರ: ಗುಂಪಿನಿಂದ ಬೇರ್ಪಟ್ಟು ಕಾಡಾನೆಯೊಂದು ನಿತ್ರಾಣಗೊಂಡು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ, ಮಠಸಾಗರ ಸಮೀಪ ನಡೆದಿದೆ.

Advertisement

21 ಕಾಡಾನೆಗಳ ಗುಂಪಿನಲ್ಲಿದ್ದ ಕಾಂತಿ ಎಂಬ ಹೆಸರಿನ ಕಾಡಾನೆ ಹಿಂಡಿನಿಂದ ಬೇರ್ಪಟ್ಟಿದ್ದು ನೀರು ಕುಡಿಯಲು ಬಂದಾಗ ಕೆರೆಯ ದಡದಲ್ಲಿ ನಿತ್ರಾಣಗೊಂಡು ಮಲಗಿದೆ.

ಐಬಿಸಿ ಕಾಫಿ ಎಸ್ಟೇಟ್‌ನಲ್ಲಿರುವ ನೀರಿನ ಹಳ್ಳದ ದಡದಲ್ಲಿ ಕಾಡಾನೆ ಕುಸಿದು ಬಿದ್ದಿದ್ದು ಸಂಪೂರ್ಣ ನಿತ್ರಾಣಗೊಂಡಿದೆ. ಇ ಟಿ ಎಫ್ ಮತ್ತು ಆರ್ ಆರ್ ಟಿ ಸಿಬ್ಬಂದಿಗಳು ಇದನ್ನು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅರಣ್ಯ ಅಧಿಕಾರಿಗಳು ದೌಡಾಯಿಸಿದ್ದು ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಕಾಡಾನೆ ಸಾವನ್ನಪ್ಪಿದೆ.

 

Advertisement

Udayavani is now on Telegram. Click here to join our channel and stay updated with the latest news.

Next