Advertisement

Sakleshpura: ಕಾಡಾನೆ ದಾಳಿ; ಕೂಲಿ ಕಾರ್ಮಿಕ ವೃದ್ದೆಗೆ ಗಾಯ

11:33 AM May 26, 2024 | Team Udayavani |

ಸಕಲೇಶಪುರ: ಕಾಡಾನೆ ದಾಳಿ ಮಾಡಿದ ಪರಿಣಾಮ ವೃದ್ದೆಯೋರ್ವರು  ಗಾಯಗೊಂಡಿರುವ ಘಟನೆ ತಾಲೂಕಿನ ಕೆಸಗುಲಿ ಗ್ರಾಮದಲ್ಲಿ ನಡೆದಿದೆ.

Advertisement

ತಾಲೂಕಿನ ಉದೇವಾರ ಗ್ರಾ.ಪಂ. ವ್ಯಾಪ್ತಿಯ ಕೆಸಗುಲಿ ಗ್ರಾಮದ ಪುಟ್ಟ ಸ್ವಾಮಿ ಗೌಡ ಎಂಬವರ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಬೇಲೂರು ತಾಲೂಕಿನ ಲಕ್ಕುಂದ ಗ್ರಾಮದ ದ್ರಾಕ್ಷಾಯಿಣಿ (60) ಗಾಯಗೊಂಡ ಕೂಲಿ ಕಾರ್ಮಿಕ ವೃದ್ದೆ. ಗಾಯಗೊಂಡ ಅವರನ್ನು ಹಾಸನದ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಉಪ ವಲಯ ಅರಣ್ಯಧಿಕಾರಿಗಳಾದ ಮಹದೇವ್, ದಿನೇಶ್ ಹಾಸನದ ಆಸ್ಪತ್ರೆಗೆ ಭೇಟಿ ನೀಡಿ ವೃದ್ದೆಯ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next