Advertisement

ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಡ

05:08 PM Jan 09, 2020 | Naveen |

ಸೈದಾಪುರ: ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದು ಶಾಸಕ ನಾಗನಗೌಡ ಕಂದಕೂರ ಹೇಳಿದರು.

Advertisement

ಸಮೀಪದ ಮಾಧ್ವಾರ ಗ್ರಾಮದಲ್ಲಿ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ 2019-20ನೇ ಸಾಲಿನ 3054 ಸಿ.ಎಂ.ಜಿ.ಎಸ್‌.ವೈ ಯೋಜನೆಯಡಿ ಸುಮಾರು 92 ಲಕ್ಷ ರೂ. ವೆಚ್ಚದ 3.3ಕಿ.ಮೀಟರ್‌ ರಸ್ತೆ ನವೀಕರಣ ಹಾಗೂ ರೂ. 10 ಲಕ್ಷ ವೆಚ್ಚದ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಹಾಗೂ ಕೆ.ಕೆ.ಆರ್‌.ಡಿ.ಬಿ ಮೈಕ್ರೋ ಯೋಜನೆಯಡಿ ನಾರಾಯಣಪೇಟ ಮುಖ್ಯ ರಸ್ತೆಯಿಂದ ತೋರಣತಿಪ್ಪ ಗ್ರಾಮದ ವರೆಗಿನ 50 ಲಕ್ಷ ರೂ. ವೆಚ್ಚದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.

ಹಿಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಲ್ಯಾಣ ಕರ್ನಾಟಕದಲ್ಲಿಯೇ ಗುರುಮಠಕಲ್‌ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದ್ದರು. ಆದರೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ಅನುದಾನ ತಡೆ ಹಿಡಿದು ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ತಾಪಂ ಸದಸ್ಯೆ ಸರೋಜಮ್ಮ ಕಲಾಲ್‌, ಮಾಧ್ವಾರ ಗ್ರಾಪಂ ಅಧ್ಯಕ್ಷೆ ಶಕುಂತಲಾ, ಯಲಸತ್ತಿ ಗ್ರಾಪಂ ಅಧ್ಯಕ್ಷ ಆಂಜನೇಯ, ಭೋಜಣ್ಣಗೌಡ ಯಡ್ಢಳ್ಳಿ, ಚಿದಾನಂದಪ್ಪ ಕಾಳೆಬೆಳಗುಂದಿ, ಶಂಕರಗೌಡ ಯಲಸತ್ತಿ, ಎಇಇ ಸಿ.ಎಂ. ಪಾಟೀಲ, ಆನಂದರೆಡ್ಡಿ ವಡವಟ್‌, ರಾಮಲಿಂಗಪ್ಪ ಮಾಧ್ವಾರ, ಪರ್ವತರೆಡ್ಡಿ, ಡಾ| ಬಾಬು, ಶಂಕರಪ್ಪಗೌಡ, ಬನ್ನಪ್ಪಗೌಡ ಸೇರಿದಂತೆ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next