Advertisement

ವಿವಾದದಲ್ಲಿ ಸಿಲುಕಿದ ತಮಿಳು ನಟಿ ಸಾಯಿ ಪಲ್ಲವಿ

11:44 PM Jun 15, 2022 | Team Udayavani |

ಶ್ರೀನಗರ: ಗೋವು ಕಳ್ಳಸಾಗಾಣಿಕೆದಾರರನ್ನು ಹೊಡೆದು ಕೊಲ್ಲುವಂಥ ಘಟನೆಗಳು ಹಾಗೂ ಕಾಶ್ಮೀರದಲ್ಲಿ ದಶಕಗಳ ಹಿಂದೆ ನಡೆದಿದ್ದ ನರಮೇಧದ ಘಟನೆಗಳು ಒಂದೇ ಎಂದು ಹೇಳುವ ಮೂಲಕ ತಮಿಳು ನಟಿ ಸಾಯಿ ಪಲ್ಲವಿ ವಿವಾದಕ್ಕೀಡಾಗಿದ್ದಾರೆ.

Advertisement

ಇತ್ತೀಚೆಗೆ ಬಿಡುಗಡೆಯಾಗಿದ್ದ ದ ಕಾಶ್ಮೀರ್‌ ಫೈಲ್ಸ್‌ ಚಿತ್ರದ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳುವಾಗ ಈ ರೀತಿ ಹೇಳಿದ್ದು, ಇದರ ಬಗ್ಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕೆಲವರು, “ಇದೊಂದು ಮೂರ್ಖತನದ ಹೇಳಿಕೆ’ ಎಂದು ಟೀಕಿಸಿದ್ದರೆ, ಇನ್ನೂ ಕೆಲವರು “ಸತ್ಯವನ್ನು ನೇರವಾಗಿ ಹೇಳಿದ ನಿಮ್ಮ ಧೈರ್ಯ ಮೆಚ್ಚುವಂಥದ್ದು’ ಎಂದು ಹೊಗಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next