Advertisement

ಹಿರಿಯ ಸಾಹಿತಿಗಳಿಗೆ ಸ್ವಗೃಹದಲ್ಲೇ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ

12:24 AM Sep 28, 2021 | Team Udayavani |

ಉಳ್ಳಾಲ/ಉಡುಪಿ/ಪುತ್ತೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಿವಿಧ ಪ್ರಶಸ್ತಿಗಳ ಪ್ರದಾನ ಸಮಾರಂಭ ಸೆ. 12ರಂದು ಬೆಂಗಳೂರಿನಲ್ಲಿ ನಡೆದಿದ್ದು, ಅನಿವಾರ್ಯ ಕಾರಣದಿಂದ ಗೈರುಹಾಜರಾಗಿದ್ದ ಕರಾವಳಿಯ ಹಿರಿಯ ಸಾಹಿತಿಗಳಾದ ಡಾ| ಅಮೃತ ಸೋಮೇಶ್ವರ, ಲಕ್ಷ್ಮೀಶ ತೋಳ್ಪಾಡಿ ಮತ್ತು ಡಾ| ಮಹಾಬಲೇಶ್ವರ ರಾವ್‌ ಅವರ ನಿವಾಸಕ್ಕೇ ತೆರಳಿ ಪ್ರದಾನ ಮಾಡಿ ಗೌರವಿಸುವ ಕಾರ್ಯಕ್ರಮವು ಸೋಮವಾರ ನಡೆಯಿತು.

Advertisement

ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ| ಬಿ.ವಿ. ವಸಂತ ಕುಮಾರ್‌, ಸದಸ್ಯರಾದ ಡಾ| ಬಿ.ಎಂ. ಶರಭೇಂದ್ರ ಸ್ವಾಮಿ, ರಿಜಿಸ್ಟ್ರಾರ್‌ ಎನ್‌. ಕರಿಯಪ್ಪ ಅವರು ಹಿರಿಯರನ್ನು ಗೌರವಿಸಿದರು.

ಅಮೃತ ಸೋಮೇಶ್ವರ ಅವರಿಗೆ “ಗೌರವಶ್ರೀ’ ಪ್ರಶಸ್ತಿ
ಉಳ್ಳಾಲ: ಹಿರಿಯ ಜನಪದ ವಿದ್ವಾಂಸ, ಸಾಹಿತಿ ಡಾ| ಅಮೃತ ಸೋಮೇಶ್ವರ ಅವರಿಗೆ ಸಾಹಿತ್ಯ ಅಕಾಡೆಮಿಯ 2020ನೇ ಸಾಲಿನ “ಗೌರವ ಶ್ರೀ’ ಪ್ರಶಸ್ತಿಯನ್ನು ಸೋಮೇಶ್ವರದಲ್ಲಿರುವ ಸ್ವಗೃಹ “ಒಲುಮೆ’ಯಲ್ಲಿ ಪ್ರದಾನ ಮಾಡಲಾಯಿತು.

ಇದನ್ನೂ ಓದಿ:ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಸಂಬಂಧಿಸಿ ವಿಟಿಯು ಜತೆ ಚರ್ಚೆ

ಈ ಸಂದರ್ಭದಲ್ಲಿ ಅಮೃತ ಸೋಮೇಶ್ವರ ಅವರ 86ನೇ ಹುಟ್ಟುಹಬ್ಬದ ಆಚರಣೆಯೂ ನಡೆಯಿತು. ಮಂಗಳೂರು ಆಕಾಶವಾಣಿ ಕೇಂದ್ರದ ಮುಖ್ಯಸ್ಥ ಸೂರ್ಯನಾರಾಯಣ ಭಟ್‌, ನರ್ಮದಾ ಅಮೃತಾ ಸೋಮೇಶ್ವರ, ಚೇತನ್‌ ಸೋಮೇಶ್ವರ, ಜೀವನ್‌ ಸೋಮೇಶ್ವರ, ರಾಜೇಶ್ವರಿ, ಸತ್ಯ ಜೀವನ್‌, ಸೃಜನ್‌ ಸೋಮೇಶ್ವರ ಹಾಗೂ ಸೃಷ್ಟಿ ಸೋಮೇಶ್ವರ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next