Advertisement

ನೈಋತ್ಯ ರೈಲ್ವೇ ಝೋನ್‌ಗೆ “ಸಹಿ ಭೋಜನ್‌ ಬೆಹ್ತರ್ ಜೀವನ್‌’ಗರಿ

12:22 AM Jul 27, 2022 | Team Udayavani |

ಬೆಂಗಳೂರು: ರೈಲಿನಲ್ಲಿ ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ಪೌಷ್ಠಿಕಾಂಶ ಆಹಾರ ಪೂರೈಕೆ ಸಂಬಂಧ ನೈಋತ್ಯ ರೈಲ್ವೇ ವಲಯವು ಕೇಂದ್ರ ರೈಲ್ವೇ ಸಚಿವಾ ಲಯದ “ಸಹಿ ಭೋಜನ್‌ ಬೆಹ್ತರ್ ಜೀವನ್‌’ ಪ್ರಮಾಣ ಪತ್ರ ಪಡೆದಿದೆ.

Advertisement

ದೇಶದ 9 ರೈಲ್ವೇ ನಿಲ್ದಾಣಗಳಿಗೆ ಈ ಪ್ರಮಾಣ ಪತ್ರವನ್ನು ನೀಡಲಾಗಿದೆ. ನೈಋತ್ಯ ರೈಲ್ವೇ ವ್ಯಾಪ್ತಿಯಲ್ಲಿ ಬರುವ ಹುಬ್ಬಳ್ಳಿ, ಮೈಸೂರು ಹಾಗೂ ಬೆಂಗಳೂರು ಮುಖ್ಯ ನಿಲ್ದಾಣ ಗ್ರಾಹಕರಿಗೆ ಆರೋಗ್ಯಕರ ಜೀವನ ಕ್ಕಾಗಿ ಉತ್ತಮ ಆಹಾರ ಎನ್ನುವ ಧ್ಯೇಯ ವಾಕ್ಯದಡಿ ಗುಣಮಟ್ಟದ ಆಹಾರ ನೀಡಲಾಗುತ್ತಿದೆ.

ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೇರಿ ಹುಬ್ಬಳ್ಳಿ, ಮೈಸೂರಿನ ನಿಲ್ದಾಣದಲ್ಲಿ ಸುಮಾರು ನೂರಕ್ಕೂ ಅಧಿಕ ಆಹಾರ ಮಳಿಗೆಗಳಿವೆ. ಇವುಗಳನ್ನು ರೈಲ್ವೇ ವಿಭಾಗದ ಆಹಾರ ಗುಣಮಟ್ಟ ವಿಭಾಗದ ಅಧಿಕಾರಿಗಳು ಪರಿಶೀಲಿ ಸುತ್ತಿದ್ದಾರೆ.

ಸ್ಟಾಲ್‌ಗ‌ಳಲ್ಲಿ ಮಾನದಂಡ
ರೈಲ್ವೇ ನಿಲ್ದಾಣವು “ಇಟ್‌ ರೈಟ್‌ ರೈಲ್ವೇ’ ಸ್ಟೇಶನ್‌ ಅಡಿ ನೋಂದಾಯಿಸಿದೆ. ಈ ವೇಳೆ ರೈಲ್ವೇ ಸಚಿವಾಲಯ ಸಂಸ್ಥೆಯೊಂದರ ಮೂಲಕ ನಡೆಸಲಾದ ಆಡಿಟ್‌ನಲ್ಲಿ ಗುಣಮಟ್ಟದ ಆಹಾರ ತಯಾರಿಕಾ ಮಾನದಂಡವನ್ನು ಸ್ಟಾಲ್‌ಗ‌ಳಲ್ಲಿ ಅಳವಡಿಸಿಕೊಂಡಿದ್ದರಿಂದ ಪ್ರಮಾಣ ಪತ್ರ ಲಭಿಸಿದೆ ಎಂದು ನೈರುತ್ಯ ರೈಲ್ವೇ ವಲಯ ಡಿವಿಜನಲ್‌ ಮ್ಯಾನೇಜರ್‌ ಕುಸುಮ ಹರಿಪ್ರಸಾದ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next