Advertisement

ಮೀನು ಹಿಡಿಯಲು ಹೋಗಿ ನೀರಿನಲ್ಲಿ ಮುಳುಗಿ ಮೂವರು ಸಾವು

08:10 AM May 06, 2020 | keerthan |

ಶಿವಮೊಗ್ಗ: ಒಬ್ಬ ಬಾಲಕ ಸೇರಿದಂತೆ ಮೂವರು ಮೀನು ಹಿಡಿಯಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಸೊರಬ ತಾಲೂಕು ತ್ಯಾವರೆತೆಪ್ಪ ಗ್ರಾಮದ‌ಲ್ಲಿ ನಡೆದಿದೆ.

Advertisement

ತ್ಯಾವರೆತೆಪ್ಪ ಗ್ರಾಮದ ಬಸವರಾಜ್ (45), ಬಸವರಾಜ್ ಅವರ ಮಗ ಆಕಾಶ್(14) ಹಾಗೂ ಶಿವಮೂರ್ತಿ(49) ಮೃತಪಟ್ಟವರು. ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು ಮೂವರು ತ್ಯಾವರೆತೆಪ್ಪ‌ ಗ್ರಾಮದ ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದರು.

ಕೋವಿಡ್-19 ಲಾಕ್ ಡೌನ್ ಹಿನ್ನೆಲೆಯಲ್ಲಿ ಇವರು ರಾತ್ರಿ ವೇಳೆ ಮೀನು ಹಿಡಿಯಲು ಹೋಗಿದ್ದರು. ಇಂದು ಬೆಳಗಿನ‌ ಜಾವ ಮೂವರ ಶವಗಳನ್ನು ಕೆರೆಯಿಂದ ಮೇಲಕ್ಕೆತ್ತಲಾಗಿದೆ.

ಅಗ್ನಿ ಶಾಮಕ‌ದಳದ ಸಿಬ್ಬಂದಿ ಹಾಗೂ ಸ್ಥಳೀಯ ಈಜುಗಾರರು ಕಾರ್ಯಾಚರಣೆ ನಡೆಸಿ ಇಂದು ಬೆಳಗಿನ ಜಾವ ಕೆರೆಯಿಂದ ಶವ ಮೇಲಕ್ಕೆತ್ತಿದ್ದಾರೆ. ಆನವಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next