Advertisement

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಫಲ: ಹಾಲಪ್ಪ ಅಭಿನಂದನೆ

05:53 PM Jul 05, 2020 | Naveen |

ಸಾಗರ: ಜೂ. 25ರಿಂದ ಜು. 3ರವರೆಗೆ ನಡೆದ ಈ ಸಾಲಿನ ಎಸ್‌.ಎಸ್‌.ಎಲ್‌.ಸಿ. ಪರೀಕ್ಷಾ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ ಪ್ರೌಢಶಾಲೆ, ಪ್ರಾಥಮಿಕ ಶಾಲಾ ಶಿಕ್ಷಕ, ಶಿಕ್ಷಕಿಯರು, ಶಾಲಾ ಶಿಕ್ಷಣ ಸಂಸ್ಥೆಗಳ ಪದಾಧಿಕಾರಿಗಳು, ಕಂದಾಯ ಇಲಾಖೆ, ತಾಲೂಕು ಪಂಚಾಯ್ತಿ, ಆರೋಗ್ಯ, ಪೊಲೀಸ್‌ ಇಲಾಖೆ, ಕೆಎಸ್‌ ಆರ್‌ಟಿಸಿ, ಆಶಾ ಕಾರ್ಯಕರ್ತೆಯರು, ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಸದಸ್ಯರು, ನೌಕರರು, ಪರೀಕಾ ಕೇಂದ್ರಗಳಲ್ಲಿ ಮುಖ್ಯಸ್ಥರಾಗಿ, ಉಪ ಮುಖ್ಯಸ್ಥರಾಗಿ, ಪ್ರಶ್ನೆ ಪತ್ರಿಕೆಯ ಅಭಿರಕ್ಷಕರಾಗಿ, ಕಚೇರಿ ನಿರ್ವಾಹಕರಾಗಿ, ಮಾರ್ಗಾಧಿಕಾರಿಗಳಾಗಿ, ಬಸ್‌ ನೋಡೆಲ್‌ ಅಧಿಕಾರಿಗಳಿಗೆ, ಮೊಬೈಲ್‌ ಸ್ವಾಧೀನಾಕಾರಿಗಳಿಗೆ ಶಾಸಕ ಎಚ್‌.ಹಾಲಪ್ಪ ಹರತಾಳು ಕೃತಜ್ಞತೆ ಸಲ್ಲಿಸಿದ್ದಾರೆ.

Advertisement

ಕೋವಿಡ್‌-19 ಸಂದರ್ಭದಲ್ಲಿ ಪರೀಕ್ಷಾ ಕಾರ್ಯವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸುವಲ್ಲಿ ಎಲ್ಲರ ಕಾರ್ಯ ಶ್ಲಾಘನೀಯವಾದದ್ದು. ಮಕ್ಕಳು ಆತ್ಮಸೈ§ರ್ಯದಿಂದ ಪರೀಕ್ಷೆ ಎದುರಿಸಲು ನಿಮ್ಮ ಪ್ರಯತ್ನ ಪ್ರಮುಖವಾಗಿದೆ. ಇದರ ಜೊತೆಗೆ ಪರೀಕ್ಷೆಯನ್ನು ಸವಾಲಿನಂತೆ ಸ್ವೀಕರಿಸಿ ಎದುರಿಸಿದ ಎಲ್ಲ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next