Advertisement

ಸಾಗರ ನಗರಸಭೆಯಲ್ಲಿ ಇವತ್ತಿಗೂ ಬಿಎಸ್‌ವೈಯೇ ಸಿಎಂ!

07:29 PM Apr 04, 2022 | Suhan S |

ಸಾಗರ: ಶಿವಮೊಗ್ಗ ಜಿಲ್ಲೆಯವರೇ ಆದ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು ಸರಿಸುಮಾರು ಒಂಬತ್ತು ತಿಂಗಳು ಕಳೆದಿದ್ದರೂ ಸಾಗರದ ನಗರಸಭೆ ಮಾತ್ರ ಈಗಲೂ ಅವರನ್ನೇ ಮುಖ್ಯಮಂತ್ರಿ ಸ್ಥಾನದಲ್ಲಿ ಇರಿಸಿ ಗೌರವಿಸುತ್ತಿದೆ!

Advertisement

ನಗರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಕೊಠಡಿಯಲ್ಲಿ ಒಂದೆಡೆ ಹಾಲಿ ಶಾಸಕ ಹಾಲಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರ ಫೋಟೋಗಳನ್ನು ಹಾಕಲಾಗಿದೆ. ಇನ್ನೊಂದೆಡೆ ಭಾರತದ ಪ್ರಧಾನ ನರೇಂದ್ರ ಮೋದಿ, ದೇಶದ ರಾಷ್ಟ್ರಪತಿ ರಾಮನಾಥ್ ಕೋವಿದ್‌ರ ಫೋಟೋಗಳಿದ್ದು, ಅವರ ಜೊತೆ ಮುಖ್ಯಮಂತ್ರಿಗಳ ಫೋಟೋ ಇರುವಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಫೋಟೋ ರಾರಾಜಿಸುತ್ತಿದೆಯೇ ವಿನಃ ಇಡೀ ಹಾಲ್‌ನಲ್ಲಿ ಎಲ್ಲಿಯೂ ರಾಜ್ಯದ ಇಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಫೋಟೋ ಕಂಡುಬರುತ್ತಿಲ್ಲ. ಗೋಡೆಯ ಮಧ್ಯದಲ್ಲಿ ಕಾಣಿಸುವ ಭಾರತ ಮಾತೆ, ವಿವೇಕಾನಂದರು. ಗಾಂಧಿ, ಅಂಬೇಡ್ಕರ್‌ರ ಫೋಟೋ ಕೆಳಗೆ ಕೂಡ ನಗರಸಭೆಯ ಎಲ್ಲ ಸದಸ್ಯರು ಅವತ್ತಿನ ಮುಖ್ಯಮಂತ್ರಿ ಬಿಎಸ್‌ವೈ ಬಂದಾಗ ಅವರಿಗೆ ಸಲ್ಲಿಸಿದ ಪೌರ ಸಮ್ಮಾನದ ಸಂದರ್ಭದ ಫೋಟೋವೇ ಇದೆ.

ಈ ಫೋಟೋ ಮೂಲಕ ಬಿಎಸ್‌ವೈ ಇವತ್ತಿಗೂ ಅಧಿಕಾರದಲ್ಲಿದ್ದರೂ ಹಿಡಿತ ಇರಿಸಿಕೊಂಡಿದ್ದಾರೆ ಎಂದು ವಿರೋಧಿಗಳು ಸುಲಭವಾಗಿ ಆರೋಪಿಸುವಂತಹ ಪರಿಸ್ಥಿತಿ ಸಾಗರದಲ್ಲಂತೂ ನಿರ್ಮಾಣವಾಗಿದೆ!

Advertisement

Udayavani is now on Telegram. Click here to join our channel and stay updated with the latest news.

Next