Advertisement

ಸಾಗರ : ಚನ್ನಮಾಜಿ ಕೆರೆಯಲ್ಲಿ ಕೆರೆಬೇಟೆ ಹಬ್ಬ; 14ಲಕ್ಷಕ್ಕೂ ಹೆಚ್ಚು ಆದಾಯ

08:07 PM Apr 11, 2022 | Team Udayavani |

ಶಿವಮೊಗ್ಗ: ಸಾಗರ ತಾಲೂಕಿನ ಚನ್ನಶೆಟ್ಟಿಕೊಪ್ಪ ಗ್ರಾಮದ ಚನ್ನಮಾಜಿ ಕೆರೆಯಲ್ಲಿ ಕೆರೆಬೇಟೆ ಹಬ್ಬದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಮಂದಿ ಮೀನು ಬೇಟೆಯಲ್ಲಿ ಭಾಗಿಯಾಗಿ ಸಂಭ್ರಮಿಸಿದರು. ಏಕಕಾಲಕ್ಕೆ ಕೆರೆಗೆ ಇಳಿದು ಕೂಣಿಗಳ ಮೂಲಕ ಮೀನು ಬೇಟೆ ಮಾಡಿದ ಗ್ರಾಮಸ್ಥರು, ಒಂದು ಕೂಣಿಗೆ 700 ರೂಪಾಯಿ ದರ ನಿಗದಿಪಡಿಸಿದ್ದ‌ರು.

Advertisement

ಕೆರೆ ಬೇಟೆ ಮಲೆನಾಡಿನ ಜನರ ಸಂಸ್ಕೃತಿಯಾಗಿದ್ದು,ಬೇಸಿಗೆ ಬಂದು ಕೆರೆಯಲ್ಲಿ ನೀರು ಕಡಿಮೆಯಾಗುತ್ತಿದ್ದಂತೆ ಆರಂಭಗೊಳ್ಳುತ್ತದೆ. ಎರಡು ವರ್ಷಕ್ಕೊಮ್ಮೆ ನಡೆಯುವ ಕೆರೆಬೇಟೆ ಹಬ್ಬದಲ್ಲಿ ಎರಡು ವರ್ಷದ ಹಿಂದೆ ಕೆರೆಯಲ್ಲಿ ಬಿಟ್ಟಿದ್ದ‌ ಮೀನುಗಳನ್ನು ಸಾರ್ವಜನಿಕರು ಹಿಡಿಯುವುದು ವಿಶೇಷ.

ಮೀನು ಹಿಡಿಯಲು ಎರಡು ಸಾವಿರ ಜನ ಭಾಗಿಯಾಗಿದ್ದರೆ‌, ಕೆರೆಬೇಟೆ ನೋಡಲಲೆಂದೇ 5 ಸಾವಿರಕ್ಕೂ ಹೆಚ್ಚು ಜನ ಆಗಮಿಸಿದ್ದರು.ಕೆರೆ ಬೇಟೆಯ ಮೂಲಕ ಚನ್ನಶೆಟ್ಟಿಕೊಪ್ಪ ಗ್ರಾಮಕ್ಕೆ 14ಲಕ್ಷಕ್ಕೂ ಹೆಚ್ಚು ಆದಾಯ ಹರಿದು ಬಂದಿದೆ. ಕೆರೆಬೇಟೆಯ ವಿಡಿಯೋಗಳು ಇದೀಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next