Advertisement

4.20 ಲಕ್ಷ ರೂ. ಮೌಲ್ಯದ 21 ಕ್ವಿಂಟಾಲ್ ಅಡಕೆ ಕಳ್ಳತನ

07:58 PM Feb 06, 2022 | Team Udayavani |

ಸಾಗರ: ಪಕ್ಕದ ಮನೆಯವನ ಅಂಗಳದಲ್ಲಿ ಒಣಗಿಸಿದ್ದ 62 ಮೂಟೆಗಳಷ್ಟು ಸಿಪ್ಪೆಗೋಟು ಅಡಕೆಯನ್ನು ರಾತ್ರೋರಾತ್ರಿ ಕಳ್ಳತನ ಮಾಡಿದ ಪ್ರಕರಣ ತಾಲೂಕಿನ ತಾಳಗುಪ್ಪ ಸಮೀಪದ ತಲವಾಟ ಗ್ರಾಮದಲ್ಲಿ ನಡೆದಿದೆ. ಸುಮಾರು 21 ಕ್ವಿಂಟಾಲ್‌ಗಳಷ್ಟು ಅಡಕೆ ಕಳ್ಳತನ ಆಗಿರಬಹುದು ಎಂದು ಅಂದಾಜಿಲಾಗಿದ್ದು, ಈ ಅಡಕೆಯ ಮೌಲ್ಯ 4.20 ಲಕ್ಷ ರೂ. ಆಗಬಹುದು ಎಂದು ಅಂದಾಜಿಸಲಾಗಿದೆ.

Advertisement

ತಲವಾಟ ಗ್ರಾಮದ ಮೋಹನ ನಾಗಾನಾಯ್ಕ ಹಾಗೂ ನೆರೆಮನೆಯಲ್ಲಿರುವ ಮಾವ ಕನ್ನಪ್ಪ ಶಂಬುಲಿಂಗ ನಾಯ್ಕ ಅವರು ತಮ್ಮ ತಮ್ಮ ತೋಟದ ಗೋಟಡಿಕೆಯನ್ನು ಪಕ್ಕದ ಮನೆಯವರಾದ ಸತ್ಯನಾರಾಯಣ ನಾಗಾನಾಯ್ಕ ಅವರ ಖಾಲಿ ಜಾಗದಲ್ಲಿ ಒಣಗಿಸಿದ್ದರು. ಅಡಕೆ ಸುಲಿ ಕೆಲಸ ಮುಗಿಸಿ ಮರುದಿನ ಬೆಳಗ್ಗೆ ನೋಡಿದಾಗ ಮೋಹನ್ ಅವರಿಗೆ ಸೇರಿದ ಸುಮಾರು 45 ಚೀಲ ಹಾಗೂ ಕನ್ನಪ್ಪ ಅವರಿಗೆ ಸೇರಿದ ಸುಮಾರು 17 ಚೀಲ ಸಿಪ್ಪೇಗೋಟು ಕಳುವಾಗಿರುವುದು ಬೆಳಕಿಗೆ ಬಂದಿದೆ. ಪ್ರಕರಣ ಬುಧವಾರ ರಾತ್ರಿ ನಡೆದಿದೆ. ಮೋಹನ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ : ರಸ್ತೆಯಲ್ಲೇ ಇಂಡಕ್ಟಿವ್ ಚಾರ್ಜಿಂಗ್ ಮೂಲಕ ಇಲೆಕ್ಟ್ರಿಕ್ ಕಾರುಗಳು ಚಾರ್ಜ್!

Advertisement

Udayavani is now on Telegram. Click here to join our channel and stay updated with the latest news.

Next