Advertisement

Sagara: ಪಾದಚಾರಿ ಮೈಮೇಲೆ ಹರಿದ ಲಾರಿ; ಮೃತ್ಯು

03:03 PM Nov 28, 2023 | Kavyashree |

ಸಾಗರ: ತಾಲೂಕಿನ ಆನಂದಪುರದಲ್ಲಿ ಲಾರಿ ಮೈಮೇಲೆ ಹರಿದು ನೀರುಗಂಟಿಯೊಬ್ಬರು ಮೃತಪಟ್ಟ ಘಟನೆ ನ.28ರ ಸೋಮವಾರ ನಡೆದಿದೆ.

Advertisement

ಆನಂದಪುರ ಗ್ರಾಮ ಪಂಚಾಯತ್‌ ನಲ್ಲಿ ನೀರುಗಂಟಿಯಾಗಿ ಕೆಲಸ ಮಾಡುತ್ತಿದ್ದ ಎಚ್.ಎಸ್.ಸದಾಶಿವರಾವ್ ಮೃತಪಟ್ಟ ದುರ್ದೈವಿ.

ಸದಾಶಿವ ಅವರು ರೈಸ್ ಮಿಲ್ ಎದುರು ರಸ್ತೆ ದಾಟುತ್ತಿದ್ದಾಗ ಮಿಲ್ಲಿಗೆ ಬರುತ್ತಿದ್ದ ಲಾರಿ ಅವರ ಮೇಲೆ ಹರಿದಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಅವರಿಗೆ ಆನಂದಪುರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾರೆ.

ಈ ಘಟನೆಗೆ ಸಂಬಂಧಿಸಿ ಆನಂದಪುರ ಉಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next