Advertisement

Sagara; ನಿಂತಿದ್ದ ಬಸ್‌ಗೆ ಗುದ್ದಿದ ಬೈಕ್: ಇಬ್ಬರಿಗೆ ತೀವ್ರ ಗಾಯ

10:53 PM Oct 09, 2023 | Team Udayavani |

ಸಾಗರ: ನಿಂತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿಗೆ ತ್ರಿಬಲ್ ರೈಡಿಂಗ್‌ನಲ್ಲಿ ಬಂದ ಬೈಕ್ ಸವಾರರು ಹಿಂದಿನಿಂದ ಗುದ್ದಿದ ಪರಿಣಾಮ ಬೈಕಿನಲ್ಲಿದ್ದ ಮೂವರೂ ಗಂಭೀರವಾಗಿ ಗಾಯಗೊಂಡ ಪ್ರಕರಣ ಸೋಮವಾರ ಮಧ್ಯಾಹ್ನ ಪಟ್ಟಣದ ಗಾಂಧಿ ನಗರದ ವೃತ್ತದಲ್ಲಿ ನಡೆದಿದೆ.

Advertisement

ಗಾಯಗೊಂಡ ಬೈಕ್ ಸವಾರರನ್ನು ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ. ತಾಲೂಕಿನ ತ್ಯಾಗರ್ತಿ ಭಾಗದ ಚಿಕ್ಕಬಿಲಗುಂಜಿಯವರಾದ ಗುರುಮೂರ್ತಿ ಅಲಿಯಾಸ್ ಸುನಿಲ್ ಹಾಗೂ ಮಧು ಎಂಬುವವರ ಸ್ಥಿತಿ ಗಂಭೀರವಾಗಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನೊಬ್ಬ ಲ್ಯಾವಿಗೆರೆಯ ಹುಡುಗ ಹೆಚ್ಚಿನ ಗಾಯಗಳಾಗದೆ ಪಾರಾಗಿದ್ದಾನೆ. ಘಟನೆಯಲ್ಲಿ ಬೈಕಿನ ಮುಂಭಾಗ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಕಾಲೇಜು ಮುಗಿಸಿ ಬರುತ್ತಿದ್ದ ಯುವಕರು ಬಸ್‌ಗೆ ಢಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ. ಹೊಡೆದ ರಭಸಕ್ಕೆ ಬಸ್‌ನೊಳಗೆ ಬೈಕ್ ತೂರಿ ಹೋಗಿ ನಿಂತಿದೆ. ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಬೈಕ್ ತೆರವುಗೊಳಿಸಿ ವಿಚಾರಣೆ ಪ್ರಾರಂಭಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next