Advertisement

Sagara ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ರೈತ ಸಾವು

05:00 PM Sep 19, 2023 | Shreeram Nayak |

ಸಾಗರ: ತಾಲೂಕಿನ ಆನಂದಪುರ ತಾವರೆಹಳ್ಳಿಯ ಕೆರೆಯಲ್ಲಿ ರೈತ ಸತೀಶ್ ಗೌಡ (51) ಎಂಬುವವರು ಕಾಲುಜಾರಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ.

Advertisement

ಜೇಡಿಸರ ರೈತ ಸತೀಶ್ ಗೌಡ ಬಿನ್ ಸ್ವಾಮಿಗೌಡ ಎಂಬುವವರು ತಮ್ಮ ಮಗ ಚೇತನ್ ಜೊತೆ ಎಮ್ಮೆಯನ್ನು ಹುಡುಕಿಕೊಂಡು ಕೆರೆ ದಂಡೆಯ ಮೇಲೆ ಬರುತ್ತಿದ್ದಾಗ ಆಕಸ್ಮಿಕವಾಗಿ ಕಾಲುಜಾರಿ ನೀರಿಗೆ ಬಿದ್ದಿದ್ದಾರೆ ಎನ್ನಲಾಗಿದೆ.

ತಕ್ಷಣ ಚೇತನ್ ಅಕ್ಕಪಕ್ಕದವರನ್ನು ಕರೆದು ಕೆರೆಯಲ್ಲಿ ಮುಳುಗಿದ್ದ ಸತೀಶ್ ಗೌಡ ಅವರನ್ನು ಮೇಲೆತ್ತಿ ಆನಂದಪುರ ಸರ್ಕಾರಿ ಆಸ್ಪತ್ರೆಗೆ ಕರೆದು ಕೊಂಡು ಬರಲಾಗಿತ್ತು. ಅವರನ್ನು ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಅವರು ಮೃತಪಟ್ಟಿದ್ದರು.

ಈ ಸಂಬಂಧ ಚೇತನ್ ನೀಡಿದ ದೂರನ್ನು ದಾಖಲಿಸಿಕೊಂಡ ಆನಂದಪುರ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next