Advertisement

ಹೇಮಂತ್‌ ಕರ್ಕರೆ ಸಾವಿಗೆ ನನ್ನ ಶಾಪ ಕಾರಣ: ಪ್ರಗ್ಯಾ ಠಾಕೂರ್‌

09:04 AM Apr 20, 2019 | Team Udayavani |

ಭೋಪಾಲ್‌: ಮಧ್ಯಪ್ರದೇಶದ ಭೋಪಾಲ್‌ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ನಾಯಕ ದಿಗ್ವಿಜಯ ಸಿಂಗ್‌ ಅವರ ಎದುರಾಳಿಯಾಗಿ ಭಾರತೀಯ ಜನತಾ ಪಕ್ಷದಿಂದ ಕಣಕ್ಕಿಳಿದರುವ ಸಾಧ್ವಿ ಪ್ರಗ್ಯಾ ಸಿಂಗ್‌ ಠಾಕೂರ್‌ ಅವರು ವಿವಾದಾತ್ಮಕ ಹೇಳಿಕೆ ಮೂಲಕ ಸುದ್ದಿಯಾಗಿದ್ದಾರೆ.
2008ರ ಮುಂಬಯಿ ಉಗ್ರದಾಳಿ ಸಂದರ್ಭದಲ್ಲಿ ಆಗ ಮಹಾರಾಷ್ಟ್ರ ಎ.ಟಿ.ಎಸ್‌. ಮುಖ್ಯಸ್ಥರಾಗಿದ್ದ ಹೇಮಂತ ಕರ್ಕರೆ ಅವರು ಈ ದಾಳಿಯಲ್ಲಿ ಜೀವ ಕಳೆದುಕೊಂಡಿದ್ದು ತಮ್ಮ ಶಾಪದ ಕಾರಣದಿಂದಲೇ ಎಂದು ಸಾಧ್ವಿ ಪ್ರಗ್ಯಾ ಹೇಳಿಕೆ ನೀಡಿದ್ದಾರೆ.

Advertisement

2008ರ ಮಾಲೆಗಾಂವ್‌ ಬಾಂಬ್‌ ನ್ಪೋಟದಲ್ಲಿ ಪ್ರಗ್ಯಾ ಸಿಂಗ್‌ ಆರೋಪಿಯಾಗಿದ್ದ ಪ್ರಕರಣದ ತನಿಖೆಯನ್ನು ಕರ್ಕರೆ ಅವರು ನಡೆಸುತ್ತಿದ್ದರು. ‘ನನ್ನ ವಿರುದ್ಧ ಸಾಕ್ಷಿಗಳು ಇಲ್ಲದಿದ್ದಲ್ಲಿ ನನ್ನನ್ನು ಬಿಟ್ಟುಬಿಡುವಂತೆ ಹೇಮಂತ್‌ ಕರ್ಕರೆಗೆ ನಾನು ಹೇಳಿದಾಗ ಅವರು ನನ್ನ ವಿರುದ್ಧ ಸಾಕ್ಷಿಗಳನ್ನು ತರುತ್ತೇನೆ ಆದರೆ ನಿನ್ನನ್ನು ಬಿಟ್ಟುಬಿಡುವುದಿಲ್ಲ ಎಂದು ಹೇಳಿದ್ದರು. ಆ ಸಂದರ್ಭದಲ್ಲಿ ನಾನು ಅವರಿಗೆ ‘ನೀವು ನಾಶವಾಗಿ ಹೋಗುತ್ತೀರಿ’ ಎಂದು ಶಾಪ ನೀಡಿದ್ದೆ ಎಂದು ಹೇಳಿರುವುದಾಗಿ ಸಾಧ್ವಿ ಇದೀಗ ಮತ್ತೆ ನೆನಪಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next