Advertisement

ನನಗೂ ಬೆದರಿಕೆ: ಪ್ರಾಚಿ

07:32 AM Oct 23, 2019 | Team Udayavani |

ಲಕ್ನೋ: ನನ್ನ ಜೀವಕ್ಕೆ ಬೆದರಿಕೆಯಿದ್ದು, ನನಗೆ ಸರಕಾರ ಭದ್ರತೆ ಒದಗಿಸಬೇಕು ಎಂದು ಹಿಂದೂತ್ವದ ನಾಯಕಿ ಸಾಧ್ವಿ ಪ್ರಾಚಿ ಆಗ್ರಹಿಸಿದ್ದಾರೆ. ಉತ್ತರಪ್ರದೇಶದಲ್ಲಿ ಹಿಂದೂ ಸಮಾಜ್‌ ಪಕ್ಷದ ನಾಯಕ ಕಮಲೇಶ್‌ ತಿವಾರಿ ಹತ್ಯೆಯಾದ ಬೆನ್ನಲ್ಲೇ ಪ್ರಾಚಿ ಈ ಕೋರಿಕೆ ಸಲ್ಲಿಸಿದ್ದಾರೆ.

Advertisement

ನನಗೆ ಕಳೆದ 10 ವರ್ಷಗಳಿಂದಲೂ ಮುಸ್ಲಿಂ ಮೂಲಭೂತವಾದಿ ಸಂಘಟನೆಗಳಿಂದ ಬೆದರಿಕೆ ಕರೆಗಳು ಬರುತ್ತಿವೆ. ಅದಕ್ಕಾಗಿ ನಾನು ಭದ್ರತೆ ಒದಗಿಸುವಂತೆ ಗೃಹ ಸಚಿವ ಅಮಿತ್‌ ಶಾ ಅವರಿಗೆ ಕೋರಿದ್ದೇನೆ ಎಂದಿದ್ದಾರೆ ಸಾಧ್ವಿ. ಅಲ್ಲದೆ, ತಿವಾರಿಗೆ ಬೆದರಿಕೆ ಹಾಕಿದವರೇ ನನ್ನ ತಲೆಗೂ 51 ಲಕ್ಷ ರೂ. ಬಹುಮಾನ ಘೋಷಿಸಿದ್ದರು ಎಂದಿದ್ದಾರೆ.

ಈ ನಡುವೆ, ತಿವಾರಿ ಹತ್ಯೆಯ ಇಬ್ಬರು ಶಂಕಿತರ ಬಗ್ಗೆ ಮಾಹಿತಿ ಕೊಟ್ಟವರಿಗೆ ತಲಾ 2.5 ಲಕ್ಷ ರೂ. ಬಹುಮಾನ ನೀಡುವುದಾಗಿ ಸೋಮವಾರ ಉ.ಪ್ರದೇಶ ಪೊಲೀಸರು ಘೋಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next