Advertisement

“ಮಣ್ಣು ಉಳಿಸಿ’ಅಭಿಯಾನ : ಜಿನಿವಾದ ಕಾರಂಜಿಯಲ್ಲಿ ಸದ್ಗುರು

11:26 PM Apr 07, 2022 | Team Udayavani |

ಜಿನಿವಾ: ಈಶಾ ಫೌಂಡೇಶನ್‌ನ ಸಂಸ್ಥಾಪಕರಾಗಿರುವ ಸದ್ಗುರು ಜಗ್ಗಿ ವಾಸುದೇವ ಅವರು “ಮಣ್ಣು ಉಳಿಸಿ’ ಅಭಿಯಾನದ ಅಂಗವಾಗಿ ಸ್ವಿಟ್ಸರ್ಲೆಂಡ್‌ನ‌ ಜಿನಿವಾದಲ್ಲಿ ಎರಡು ದಿನಗಳ ಕಾಲ ಕಾರ್ಯಕ್ರಮಗಳನ್ನು ನಡೆಸಿದ್ದಾರೆ.

Advertisement

ಅರ್ಥ್ವಾರ್ಮ್ ಸಿಇಒ ಬಾಸ್ಟಿನ್‌ ಸಚೇತ್‌ ಅವರೊಂದಿಗೆ ಬುಧವಾರ ಸಂವಾದ ನಡೆಸಿದ ಅನಂತರ ಸದ್ಗುರು ಅವರು ಜಿನಿವಾದ ಪ್ರಸಿದ್ಧ ಪ್ರವಾಸಿ ತಾಣವಾದ “”ಜೆಟ್‌ ಡಿ’ಇಯವು” ಕಾರಂಜಿಗೆ ತೆರಳಿದ್ದಾರೆ. ಅಲ್ಲಿ ಸದ್ಗುರುಗಳ ಅಭಿಯಾನಕ್ಕೆ ಬೆಂಬಲ ತೋರಿಸುವ ನಿಟ್ಟಿನಲ್ಲಿ ಕಾರಂಜಿಗೆ ಹಸುರು ಮತ್ತು ನೀಲಿ ಬಣ್ಣಗಳ ಲೈಟಿಂಗ್‌ ಹಾಕಲಾಗಿತ್ತು. ಅಲ್ಲಿದ್ದ ಅಭಿಮಾನಿಗಳೊಂದಿಗೆ ಸದ್ಗುರು ಹೆಜ್ಜೆಯನ್ನೂ ಹಾಕಿದ್ದಾರೆ.

ಜಿನಿವಾದಲ್ಲಿ ಕಾರ್ಯಕ್ರಮ ಮುಗಿಸಿರುವ ಸದ್ಗುರು ಅವರು ಪ್ಯಾರಿಸ್‌ನತ್ತ ಪ್ರಯಾಣ ಬೆಳೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next