Advertisement
ಸಾವಿರಕ್ಕಿಂತ ಅಧಿ ಕ ಜನಸಂಖ್ಯೆ ಹೊಂದಿರುವ ಸದಾಶಿವಪೇಟೆ ಗ್ರಾಮದಲ್ಲಿ ಕೇವಲ ಒಂದೇ ಒಂದು ಅಂಗನವಾಡಿ ಕೇಂದ್ರವಿದ್ದು, ದಾಖಲಾತಿ ಪ್ರಕಾರ ಒಟ್ಟು 38 ಮಕ್ಕಳು ಈ ಕೇಂದ್ರದಲ್ಲಿರುವರು ಎಂದಿದೆ. ಸಣ್ಣ ಕೊಠಡಿಯಲ್ಲಿ ಅಷ್ಟು ಮಕ್ಕಳನ್ನು ಕೂರಿಸುವುದು ಕಷ್ಟಸಾಧ್ಯ. ಮಕ್ಕಳ ದಾಖಲಾತಿಗನುಗುಣವಾಗಿ ಗ್ರಾಮದಲ್ಲಿ ಇನ್ನೊಂದು ಅಂಗನವಾಡಿ ಕೇಂದ್ರ ತೆರೆಯುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಆದರೂ ಯಾವ ಸ್ಪಂದನೆಯೂ ಈ ವರೆಗೆ ಸಿಕ್ಕಿಲ್ಲ ಎನ್ನುವುದು ಗ್ರಾಮಸ್ಥರು ಅಳಲು.
Related Articles
Advertisement
ಅಧಿಕ ಮಕ್ಕಳ ಸಂಖ್ಯೆಯನ್ನು ಹೊಂದಿದ ಈ ಅಂಗನವಾಡಿ ಕೇಂದ್ರವನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ಕೆಲವೇ ದಿನಗಳಲ್ಲಿ ನಿವೃತ್ತಿ ಹೊಂದಲಿರುವ ಆಯಾ ಮಂಜುಳಾ ದೈವಜ್ಞರ ಮೇಲಿದೆ. ಬೆಳಗ್ಗೆ 9:30 ರಿಂದ ಸಂಜೆ 4 ಗಂಟೆ ವರೆಗೆ ತೆರೆಯಬೇಕಾಗಿದ್ದ ಅಂಗನವಾಡಿ ಕೇಂದ್ರ, ಮಧ್ಯಾಹ್ನಕ್ಕೆ ಮೊಟಕುಗೊಳಿಸಲಾಗುತ್ತಿದೆ. ತಾತ್ಕಾಲಿಕವಾಗಿ ನಿಯಮಿಸಿರುವ ನಾರಾಯಣಪುರ ಅಂಗನವಾಡಿ ಶಿಕ್ಷಕಿ ರೇಣುಕಾ ಹಿಂಡಿ ಎನ್ನುವವರು ವಾರದಲ್ಲಿ ಒಂದು ಬಾರಿ ಬಂದು ಹೋಗುತ್ತಿದ್ದಾರೆ. ವಾರಕ್ಕೊಮ್ಮೆ ಶಿಕ್ಷಕಿ ಬಂದು ಹೋದರೆ ಮಕ್ಕಳಿಗೆ ಎಂಥ ಪಾಠ ಮಾಡಬಹುದು ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದ್ದು, ನಮ್ಮ ಗ್ರಾಮದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಕೂಡಲೇ ಶಿಕ್ಷಕಿಯನ್ನು ನೇಮಿಸಿ ಮಕ್ಕಳಿಗೆ ಅನುಕೂಲ ಕಲ್ಪಿಸಬೇಕು ಹಾಗೂ ಮಕ್ಕಳ ಸಂಖ್ಯೆಗನುಗುಣವಾಗಿ ಇನ್ನೊಂದು ಅಂಗನವಾಡಿ ತೆರಯಬೇಕು ಎನ್ನುವುದು ಗ್ರಾಮಸ್ಥರು ಒತ್ತಾಯವಾಗಿದೆ.
ಸಂಪರ್ಕಕ್ಕೆ ಸಿಗದ ಸಿಡಿಪಿಒಸದಾಶಿವಪೇಟೆ ಅಂಗನವಾಡಿ ಕೇಂದ್ರಕ್ಕೆ ಶಿಕ್ಷಕಿ ನೇಮಿಸುವ ಕುರಿತು ಮಾಹಿತಿ ಪಡೆಯಲು ಸಿಡಿಪಿಒ ಪರಶುರಾಮ ಗಾಜಿ ಅವರಿಗೆ ಕರೆ ಮಾಡಿದರೆ ಕರೆ ಸ್ವೀಕರಿಸಲಿಲ್ಲ. ಇನ್ನೂ ಕಚೇರಿಗೆ ಹೋದರೂ ಸಿಡಿಪಿಒ ಅವರು ಸಂಪರ್ಕಕ್ಕೆ ಸಿಗಲಿಲ್ಲ. ಗ್ರಾಮದಲ್ಲಿ 500 ಜನಸಂಖ್ಯೆಗೆ ಒಂದರಂತೆ ಅಂಗನವಾಡಿ ಕೇಂದ್ರ ತೆರೆಯಬೇಕು ಎನ್ನುವ ನಿಯಮವಿದೆ. ಸದಾಶಿವಪೇಟೆಯಲ್ಲಿ ಒಂದು ಸಾವಿರ ಜನಸಂಖ್ಯೆ ಇದೆ. ಹೀಗಾಗಿ ಹೆಚ್ಚು ಮಕ್ಕಳು ಇರುವ ಕಾರಣ ಮತ್ತೊಂದು ಅಂಗನವಾಡಿ ಕೇಂದ್ರ ತೆರೆಯಲು ಅನುಮತಿ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು.
ವಿಜಯಲಕ್ಷ್ಮೀ ಅಳ್ಳಿಗಿಡದ,
ಅಂಗನವಾಡಿ ಕೇಂದ್ರದ ಮೇಲ್ವಿಚಾರಕಿ ಸದಾಶಿವ ಹಿರೇಮಠ