Advertisement
ನಗರದಲ್ಲಿ ರವಿವಾರ ನಡೆದ ಭೋವಿ ಸಮಾಜದ ಸಮಾರಂಭದಲ್ಲಿ ಮಾತನಾಡುವಾಗ ಸದಾಶಿವ ಆಯೋಗದಲ್ಲಿ ಅನ್ಯಾಯವಾಗದಂತೆ ನೋಡಿಕೊಳ್ಳಲು ಪ್ರಯತ್ನಿಸಲಾಗುವುದು ಎಂದಿದ್ದೆ. ಆದರೆ ತನ್ನ ಅನಿಸಿಕೆಯನ್ನು ತಪ್ಪಾಗಿ ಗ್ರಹಿಸಲಾಗಿದೆ. ಸದಾಶಿವ ಆಯೋಗದ ವಿರುದ್ಧದ ವಿಚಾರ ಖಂಡಿತವಾಗಿಯೂ ನನಗಿಲ್ಲ. ನಾನು ಬಸವಣ್ಣವರ ಅನುಯಾಯಿಯಾಗಿದ್ದು, ಅವರ ತತ್ವ ಪಾಲನೆಯೊಂದಿಗೆ ಬಂದಿದ್ದೇನೆ. ಯಾವುದೇ ಸಮಾಜಕ್ಕೆ ಅನ್ಯಾಯ ಮಾಡುವ ಉದ್ದೇಶ ನನಗೆ ಖಂಡಿತವಾಗಿಯೂ ಇಲ್ಲ. ನನ್ನ ಅನಿಸಿಕೆ ತಪ್ಪಾಗಿ ಗ್ರಹಿಸಿರುವುದಕ್ಕೆ ನೋವಿದೆ. ಒಂದು ವೇಳೆ ಬಾಯ್ತಪ್ಪಿನಿಂದ ಏನಾದರೂ ಶಬ್ದ ಪ್ರಯೋಗವಾಗಿದ್ದರೆ ಅದಕ್ಕೆ ವಿಷಾದಿಸುತ್ತೇನೆ ಎಂದು ಹೊರಟ್ಟಿ ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
Advertisement
ಸದಾಶಿವ ವರದಿ ಜಾರಿ ತಡೆಯುವುದಾಗಿ ಹೇಳಿಲ್ಲ
07:08 AM Jan 22, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.