Advertisement

ಸದಾಶಿವ ವರದಿ ಜಾರಿ ತಡೆಯುವುದಾಗಿ ಹೇಳಿಲ್ಲ

07:08 AM Jan 22, 2019 | Team Udayavani |

ಹುಬ್ಬಳ್ಳಿ: ಸದಾಶಿವ ಆಯೋಗದಿಂದ ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇನೆಂದು ಹೇಳಿದ್ದೇನೆ ಹೊರತು ಸದಾಶಿವ ಆಯೋಗ ಜಾರಿಯಾಗದಂತೆ ನೋಡುತ್ತೇನೆ ಎಂದು ಹೇಳಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಲಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

Advertisement

ನಗರದಲ್ಲಿ ರವಿವಾರ ನಡೆದ ಭೋವಿ ಸಮಾಜದ ಸಮಾರಂಭದಲ್ಲಿ ಮಾತನಾಡುವಾಗ ಸದಾಶಿವ ಆಯೋಗದಲ್ಲಿ ಅನ್ಯಾಯವಾಗದಂತೆ ನೋಡಿಕೊಳ್ಳಲು ಪ್ರಯತ್ನಿಸಲಾಗುವುದು ಎಂದಿದ್ದೆ. ಆದರೆ ತನ್ನ ಅನಿಸಿಕೆಯನ್ನು ತಪ್ಪಾಗಿ ಗ್ರಹಿಸಲಾಗಿದೆ. ಸದಾಶಿವ ಆಯೋಗದ ವಿರುದ್ಧದ ವಿಚಾರ ಖಂಡಿತವಾಗಿಯೂ ನನಗಿಲ್ಲ. ನಾನು ಬಸವಣ್ಣವರ ಅನುಯಾಯಿಯಾಗಿದ್ದು, ಅವರ ತತ್ವ ಪಾಲನೆಯೊಂದಿಗೆ ಬಂದಿದ್ದೇನೆ. ಯಾವುದೇ ಸಮಾಜಕ್ಕೆ ಅನ್ಯಾಯ ಮಾಡುವ ಉದ್ದೇಶ ನನಗೆ ಖಂಡಿತವಾಗಿಯೂ ಇಲ್ಲ. ನನ್ನ ಅನಿಸಿಕೆ ತಪ್ಪಾಗಿ ಗ್ರಹಿಸಿರುವುದಕ್ಕೆ ನೋವಿದೆ. ಒಂದು ವೇಳೆ ಬಾಯ್ತಪ್ಪಿನಿಂದ ಏನಾದರೂ ಶಬ್ದ ಪ್ರಯೋಗವಾಗಿದ್ದರೆ ಅದಕ್ಕೆ ವಿಷಾದಿಸುತ್ತೇನೆ ಎಂದು ಹೊರಟ್ಟಿ ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಹುಬ್ಬಳ್ಳಿ: ಸದಾಶಿವ ಆಯೋಗ ಜಾರಿ ತಡೆಯುತ್ತೇನೆ ಎಂದು ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ವಿವಿಧ ದಲಿತಪರ ಸಂಘಟನೆಯವರು ಬಸವರಾಜ ಹೊರಟ್ಟಿ ನಿವಾಸದೆದುರು ಪ್ರತಿಭಟನೆ ನಡೆಸಿದರು. ತಮ್ಮ ಅನಿಸಿಕೆ ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೊರಟ್ಟಿ ಸಮಜಾಯಿಷಿ ನೀಡಿ ಮನವೊಲಿಸಿದ್ದರಿಂದ ಹೋರಾಟ ಹಿಂಪಡೆಯಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next