Advertisement

Sirsi: ಡಿ.ಕೆ.ಸುರೇಶ್ ಸೋಲಿನಿಂದ ನೋವಾಗಿದ್ದು ಹೆಬ್ಬಾರರಿಗೆ! ಸದಾನಂದ ಭಟ್ಟ ವ್ಯಂಗ್ಯ

04:13 PM Jun 11, 2024 | sudhir |

ಶಿರಸಿ: ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ತಾಂತ್ರಿಕವಾಗಿ ಬಿಜೆಪಿ ಜೊತೆ ಇದ್ದಾರೆ. ಅವರಿಗೆ ಡಿ.ಕೆ.ಸುರೇಶ್ ಅವರ ಸೋಲಿಗೆ ಅತಿ ಹೆಚ್ಚು ನೋವಾಗುತ್ತದೆ ಎಂದು ಬಿಜೆಪಿ ವಕ್ತಾರ ಸದಾನಂದ ಭಟ್ಟ ಟಾಂಗ್ ನೀಡಿದರು.

Advertisement

ಬಿಜೆಪಿಗೆ‌ ಲೆಕ್ಕಕ್ಕೆ‌ ಮೂರು ಶಾಸಕರಾದರೂ ಯಲ್ಲಾಪುರದವರು ಯಾವ ಸಹಕಾರ ನೀಡಿಲ್ಲ. ಕ್ಷೇತ್ರದ ವಿಠಲ ಹಲಗೇಕರ ಹಾಗೂ ದಿನಕರ ಶೆಟ್ಟಿ ಮಾತ್ರ ಶಾಸಕರು. ಹೆಬ್ಬಾರರು ತಾಂತ್ರಿಕವಾಗಿ ಇದ್ದಾರೆ ಎಂದರು.

ಲೋಕಸಭಾ‌ ಚುನಾವಣೆಯಲ್ಲಿ ಮಾಜಿ ಸಂಸದ‌ ಅನಂತಕುಮಾರ ಹೆಗಡೆ, ಶಾಸಕ ಶಿವರಾಮ ಹೆಬ್ಬಾರ್ ಅವರು‌ ಸೇರಿದಂತೆ ಯಾರು‌ ಕೆಲಸ ಮಾಡಿಲ್ಲ‌ ಎಂಬ ವರದಿ‌‌ ಪಕ್ಷದ ವರಿಷ್ಠರಿಗೆ ಜಿಲ್ಲಾ ಘಟಕ ನೀಡಲಿದೆ ಎಂದೂ ಹೇಳಿದರು.

ಸಹಕಾರ ಪ್ರಕೋಷ್ಠ ಆರ್.ವಿ.ಹೆಗಡೆ, ಗ್ರಾಮೀಣ ಅಧ್ಯಕ್ಷೆ ಉಷಾ ಹೆಗಡೆ, ನಗರ ಮಂಡಲ‌ ಅಧ್ಯಕ್ಷ ಆನಂದ ಸಾಲೇರ, ಸಾಮಾಜಿಕ‌ ಜಾಲ‌ತಾಣದ ರವಿಚಂದ್ರ ಶೆಟ್ಟಿ ಇತರರು‌ ಇದ್ದರು.

ಇದನ್ನೂ ಓದಿ: ಕಬ್ಬಿನ ಬಾಕಿ ಹಣ ಬಡ್ಡಿ ಸಮೇತ ರೈತರಿಗೆ ಪಾವತಿಸಲು ಕ್ರಮ ಕೈಗೊಳ್ಳಿ: ಕುರುಬೂರು ಶಾಂತಕುಮಾರ

Advertisement
Advertisement

Udayavani is now on Telegram. Click here to join our channel and stay updated with the latest news.

Next