Advertisement

ಸಚಿನ್‌ ಸಲಹೆಯಿಂದ ನಿವೃತ್ತಿ ಗೊಂದಲ ಮುಗಿದಿದೆ: ಯುವಿ

09:50 PM Mar 25, 2019 | Sriram |

ಮುಂಬೈ: ಭಾನುವಾರ ರಾತ್ರಿ ಮುಂಬೈ ಇಂಡಿಯನ್ಸ್‌ ಪರ ಸಿಡಿದ ಯುವರಾಜ್‌ ಸಿಂಗ್‌, ಸದ್ಯಕ್ಕೆ ನಿವೃತ್ತಿ ಯೋಚನೆ ಇಲ್ಲ ಎಂದು ತಿಳಿಸಿದ್ದಾರೆ.

Advertisement

ಈ ಬಗ್ಗೆ ಕ್ರಿಕೆಟ್‌ ದೇವರು ಸಚಿನ್‌ ತೆಂಡುಲ್ಕರ್‌ ಜೊತೆ ಚರ್ಚಿಸಿದ್ದೇನೆ. ಅದು ನನ್ನ ಗೊಂದಲಗಳನ್ನು ಬಗೆಹರಿಸಿದೆ. ಎಲ್ಲಿಯವರೆಗೆ ನನಗೆ ಆಡುವುದರಲ್ಲಿ ಸಂತೋಷ ಸಿಗುತ್ತದೋ, ಅಲ್ಲಿಯವರೆಗೆ ಮುಂದುವರಿಯುತ್ತೇನೆ, ಸಮಯ ಬಂದ ತಕ್ಷಣ ಮೊದಲು, ಕ್ರಿಕೆಟ್‌ ಬೂಟುಗಳನ್ನು ಕಳಚಿಟ್ಟು ಮೈದಾನದಿಂದ ಆಚೆ ನಡೆಯುತ್ತೇನೆ ಎಂದು ತಿಳಿಸಿದ್ದಾರೆ. ಯುವಿ ತಮ್ಮ ಕಳಪೆ ಫಾರ್ಮ್ ಕಾರಣ ಭಾರತ ಕ್ರಿಕೆಟ್‌ ತಂಡದಿಂದ ಹೊರಬಿದ್ದಿದ್ದು, ಮತ್ತೆ ಸ್ಥಾನ ಗಳಿಸುವ ಎಲ್ಲ ಸಾಧ್ಯತೆಗಳು ಮುಚ್ಚಿ ಹೋಗಿವೆ.

Advertisement

Udayavani is now on Telegram. Click here to join our channel and stay updated with the latest news.

Next