Advertisement

ಸಚಿನ್‌, ಸೌರವ್‌ ಕೋಚ್‌ ಆಯ್ಕೆಗೆ ಹಣ ಕೇಳಿಲ್ಲ: ಬಿಸಿಸಿಐ

06:29 PM Jun 12, 2017 | |

ಹೊಸದಿಲ್ಲಿ: ಭಾರತ ಕ್ರಿಕೆಟ್‌ ತಂಡದ ನೂತನ ಕೋಚ್‌ ಆಯ್ಕೆ ಮಾಡಲು ಸಚಿನ್‌ ತೆಂಡುಲ್ಕರ್‌, ಸೌರವ್‌ ಗಂಗೂಲಿ, ವಿವಿಎಸ್‌ ಲಕ್ಷ್ಮಣ್‌ ಅವರಿರುವ ಉನ್ನತ ಸಲಹಾ ಸಮಿತಿ ಬಿಸಿಸಿಐ ಬಳಿ ಹಣ ಕೇಳಿದ್ದಾರೆಂದು ಆಂಗ್ಲ ದಿನಪತ್ರಿಕೆಯೊಂದು ವರದಿ ಮಾಡಿತ್ತು. ಆದರೆ ಇದನ್ನು ಬಿಸಿಸಿಐ ನಿರಾಕರಿಸಿದೆ. ಜೊತೆಗೆ ಸುಳ್ಳು ಸುದ್ದಿ ಪ್ರಕಟಿಸಿದೆ ಎಂದು ಪತ್ರಿಕೆ ವಿರುದ್ಧ ಕಿಡಿಕಾರಿದೆ. 

Advertisement

ಪತ್ರಿಕೆ ಪ್ರಕಟಿಸಿರುವ ಸುದ್ದಿ ಪೂರ್ಣ ಆಧಾರರಹಿತ ಮತ್ತು ದೋಷಪೂರ್ಣವಾಗಿದೆ. ಈ ಹಿರಿಯ ಕ್ರಿಕೆಟ್‌ ದಂತಕಥೆಗಳು ನೀಡುತ್ತಿರುವ ಕೊಡುಗೆಯ ಮಹತ್ವ ತಗ್ಗಿಸುವ ಉದ್ದೇಶ ಹೊಂದಿದೆ. ಈ ವರದಿ ಸಂಪೂರ್ಣ ತಪ್ಪು. ಈ ಕ್ರಿಕೆಟಿಗರು ನೀಡುತ್ತಿರುವ ಮಾರ್ಗದರ್ಶನ ಅತ್ಯಮೂಲ್ಯವಾಗಿದೆ. ಸಂಬಂಧಪಟ್ಟ ಪತ್ರಿಕೆ ತನ್ನ ಸುದ್ದಿಯನ್ನು ಹಿಂಪಡೆಯಬೇಕು ಎಂದು ಬಿಸಿಸಿಐ ಸಿಇಒ ರಾಹುಲ್‌ ಜೊಹ್ರಿ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next