Advertisement

ಎಲೆಕ್ಟ್ರಿಕ್‌ ಕಾರು ಪರ ಸಚಿನ್‌ ಬ್ಯಾಟಿಂಗ್‌

03:45 AM Jul 03, 2017 | Harsha Rao |

ಮುಂಬಯಿ: ಅಗ್ಗದ ಮಾರುತಿ-800 ಕಾರಿನಿಂದ ಹಿಡಿದು 2.62 ಕೋಟಿ ರೂ.ಗಳ ಬಿಎಂಡಬ್ಲೂé ಕಾರಿನವರೆಗೆ ಚಾಲನೆ ಮಾಡಿದ ಹಾಗೂ ಖರೀದಿಸಿದ ಅನುಭವವಿರುವ ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ ಇದೀಗ ಕೇಂದ್ರ ಸರಕಾರದ ಎಲೆಕ್ಟ್ರಿಕ್‌ ಕಾರು ಯೋಜನೆ ಪರ ಬ್ಯಾಟಿಂಗ್‌ ಮಾಡಿದ್ದಾರೆ.

Advertisement

2030ರ ವೇಳೆಗೆ ಪೆಟ್ರೋಲ್‌, ಡೀಸೆಲ್‌ ಕಾರುಗಳು ಮಾಯವಾಗಿ, ದೇಶದ ರಸ್ತೆಗಳಲ್ಲಿ ಕೇವಲ ವಿದ್ಯುತ್‌ಚಾಲಿತ ಕಾರುಗಳಷ್ಟೇ ಸಂಚರಿಸುವಂತೆ ಮಾಡುವ ಯೋಜನೆ ಹಾಕಿ ಕೊಂಡಿದ್ದೇವೆ ಎಂದು ಇತ್ತೀಚೆಗಷ್ಟೇ ಕೇಂದ್ರ ಸರಕಾರ ಹೇಳಿತ್ತು. ಜತೆಗೆ, ಇದರ ಬಳಕೆ ಹೆಚ್ಚಿಸಲು ಸಬ್ಸಿಡಿ ಮತ್ತು ಪ್ರೋತ್ಸಾಹ ಧನ ವನ್ನೂ ನೀಡಲಾಗುತ್ತದೆ ಎಂದಿತ್ತು. ಈ ಕುರಿತು ಭಾನುವಾರ ಪ್ರತಿಕ್ರಿಯಿಸಿರುವ ತೆಂಡೂಲ್ಕರ್‌, “ಭೂಮಿಯನ್ನು ರಕ್ಷಿಸುವ ಹೊಣೆಗಾರಿಕೆ ಪ್ರಸ್ತುತ ತಲೆಮಾರಿಗಿದೆ. ಮುಂ ದಿನ ತಲೆಮಾರಿಗೆ ನಾವು ಅತ್ಯುತ್ತಮವಾದ ಹಾಗೂ ಸುರಕ್ಷಿತವಾದ ಭೂಮಿಯನ್ನು ನೀಡಬೇಕಿದೆ. ಹಾಗಾಗಿ, ವಿದ್ಯುತ್‌ಚಾಲಿತ ಕಾರುಗಳನ್ನು ಪರಿಚಯಿಸುವ ಕೇಂದ್ರ ಸರಕಾರದ ನಿರ್ಧಾರ ಸರಿಯಾದದ್ದು. ಇಡೀ ಜಗತ್ತೇ ಈ ನಿಟ್ಟಿನಲ್ಲಿ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ,’ ಎಂದು ಹೇಳಿದ್ದಾರೆ.

ಪರಿಸರ ಸ್ನೇಹಿ ವಾಹನಗಳೆಂದರೆ ಟೆಸ್ಟ್‌ ಮ್ಯಾಚ್‌ನಲ್ಲಿ ದೀರ್ಘ‌ ಇನ್ನಿಂಗ್ಸ್‌ ಆಡಿದಂತೆ ಎಂದೂ ಕ್ರಿಕೆಟ್‌ ದೇವರು ಅಭಿಪ್ರಾಯಪಟ್ಟಿ ದ್ದಾರೆ. ಯಾವುದೇ ಬದಲಾವಣೆಯು ರಾತ್ರಿ ಕಳೆವುದರೊಳಗೆ ಆಗುವುದಿಲ್ಲ. ಯಾವುದೇ ಕಾರ್ಯವಾಗಲಿ, ಮೊದಲು ಆರಂಭಿಸಬೇಕು. ನಂತರ ಅದು ತನ್ನಿಂತಾನೇ ಯಶಸ್ವಿಯಾಗುತ್ತಾ ಸಾಗುತ್ತದೆ ಎಂದಿದ್ದಾರೆ ಸಚಿನ್‌.

Advertisement

Udayavani is now on Telegram. Click here to join our channel and stay updated with the latest news.

Next