Advertisement

ಶಬರಿಮಲೆ: ಕೇರಳಕ್ಕೆ ಹಿನ್ನಡೆ

06:00 AM Oct 08, 2018 | |

ತಿರುವನಂತಪುರ: ಶಬರಿ ಮಲೆಗೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ಕುರಿತು ದೇಗುಲದ ಪ್ರಮುಖ ಅರ್ಚಕರು (ತಂತ್ರಿ ಕುಟುಂಬ) ಹಾಗೂ ಪಂಡಾಲಂ ರಾಜಮನೆತನದ ಸದಸ್ಯರ ಜತೆ ಮಾತುಕತೆ ನಡೆಸುವ ಕೇರಳ ಸರಕಾರದ ಯತ್ನ ವಿಫ‌ಲವಾಗಿದೆ.

Advertisement

ಸುಪ್ರೀಂ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಿಲ್ಲ ಎಂದು ನಿರ್ಧರಿಸಿರುವ ಕೇರಳ ಸರಕಾರದೊಂದಿಗೆ ಮಾತುಕತೆ ನಡೆಸಿ ಯಾವುದೇ ಪ್ರಯೋಜನವಿಲ್ಲ ಎಂದು ಅರ್ಚ ಕರು ಹೇಳಿದ್ದಾರೆ. ವಿವಾದದ ಕುರಿತು ಸೋಮವಾರ ಚರ್ಚಿಸಲು ಸಿಎಂ ಪಿಣರಾಯಿ ವಿಜಯನ್‌ ಅವರು ತಂತ್ರಿ ಕುಟುಂಬ ಮತ್ತು ಪಂಡಾಲಂ ಕುಟುಂಬಕ್ಕೆ ಆಹ್ವಾನ ನೀಡಿದ್ದರು. ಆದರೆ ರವಿವಾರವೇ ಈ ಕುರಿತು
ಪ್ರತಿ ಕ್ರಿಯಿಸಿರುವ ಎರಡೂ ಕುಟುಂಬದ ಸದಸ್ಯರು ಮಾತು ಕತೆಗೆ ನಾವು ಸಿದ್ಧರಿಲ್ಲ. ದೇಗುಲದ ಸಂಪ್ರ ದಾಯಗಳಿಗೆ ವಿರುದ್ಧ ಹೋಗು ವುದಿಲ್ಲ ಎಂದೂ ತಿಳಿಸಿದ್ದಾರೆ. ಇದರ ನಡುವೆಯೇ, ದೇಗುಲದ ಸಂಪ್ರದಾಯಕ್ಕೆ ಚ್ಯುತಿ ತರಬಾರದು ಎಂದು ಆಗ್ರಹಿಸಿ ಅಯ್ಯಪ್ಪ ಸ್ವಾಮಿ ಭಕ್ತರು ನಡೆಸುತ್ತಿರುವ ಪ್ರತಿಭಟನೆ ರವಿವಾರವೂ ಮುಂದುವರಿದಿದ್ದು, ದಿಲ್ಲಿಯಲ್ಲೂ ಪ್ರತಿಭಟನೆಗಳು ನಡೆದಿವೆ.

Advertisement

Udayavani is now on Telegram. Click here to join our channel and stay updated with the latest news.

Next