Advertisement

ಶಬರಿಮಲೆ ಅಯ್ಯಪ್ಪ ದೇಗುಲ: ಕೈಪಿಡಿ ವಾಪಸ್‌ ಪಡೆದ ಕೇರಳ ಸರ್ಕಾರ

08:51 AM Nov 18, 2022 | Team Udayavani |

ಪತನಂತಿಟ್ಟ: ವಾರ್ಷಿಕ ಉತ್ಸವಕ್ಕಾಗಿ ಶಬರಿಮಲೆ ಅಯ್ಯಪ್ಪ ದೇಗುಲ ಗುರುವಾರ ಭಕ್ತರಿಗೆ ತೆರೆಯುತ್ತಿದ್ದಂತೆಯೇ ಕೇರಳ ಸರ್ಕಾರ ಎಡವಟ್ಟು ಮಾಡಿಕೊಂಡಿದೆ.

Advertisement

2018ರಲ್ಲಿ ಸುಪ್ರೀಂಕೋರ್ಟ್‌ ಎಲ್ಲಾ ವಯೋಮಿತಿಯ ಮಹಿಳೆಯರಿಗೆ ದೇಗುಲಕ್ಕೆ ಪ್ರವೇಶಾವಕಾಶ ಮಾಡಿಕೊಡಬೇಕು ಎಂಬ ತೀರ್ಪಿನ ಅಂಶ ಇರುವ ಕೈಪಿಡಿಯನ್ನು ಮುದ್ರಿಸಿ ಪೊಲೀಸ್‌ ಇಲಾಖೆಗೆ ನೀಡಲಾಗಿತ್ತು. ಈ ಬಗ್ಗೆ ಬಿಜೆಪಿ ಕಟುವಾಗಿ ಆಕ್ಷೇಪ ವ್ಯಕ್ತಪಡಿಸಿದ ಬಳಿಕ ಅದನ್ನು ವಾಪಸ್‌ ಪಡೆಯಲಾಗಿದೆ. ದುರುದ್ದೇಶದಿಂದಲೇ ಎಲ್‌ಡಿಎಫ್ ಸರ್ಕಾರ ಇಂಥ ಕ್ರಮ ಕೈಗೊಂಡಿದೆ ಎಂದು ಅದು ಹೇಳಿತ್ತು. ಆದರೆ, ಈ ಆರೋಪ ತಿರಸ್ಕರಿಸಿದ್ದ ಕೇರಳ ದೇವಸ್ವಂ ಸಚಿವ ಕೆ.ರಾಧಾಕೃಷ್ಣನ್‌ ಬಹಳ ಹಿಂದೆಯೇ ಈ ಕೈಪಿಡಿ ಮುದ್ರಿಸಲಾಗಿತ್ತು ಎಂದಿದ್ದರು.

ಈ ನಡುವೆ ದೇಶದ ವಿವಿಧ ಭಾಗಗಳಿಂದ ಧಾರಾಕಾರ ಮಳೆಯನ್ನೂ ಲೆಕ್ಕಿಸದೆ ಅಯ್ಯಪ್ಪನ ಸನ್ನಿಧಾನಕ್ಕೆ ಬಂದು ಸಾವಿರಾರು ಮಂದಿ ದರ್ಶನ ಪಡೆಯುತ್ತಿದ್ದಾರೆ.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next