Advertisement
ಪಟ್ಟಣಂತಿಟ್ಟ ಜಿಲ್ಲೆಯಲ್ಲಿನ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರು ಪ್ರವೇಶಕ್ಕೆ ಯತ್ನಿಸಿದರೆ ತನ್ನ ಮಹಿಳಾ ಘಟಕದ ಕಾರ್ಯಕರ್ತರು ಆತ್ಮಹತ್ಯೆ ಮಾಡಿಕೊಳ್ಳಲಿದ್ದಾರೆ ಎಂದು ಕೇರಳದ ಶಿವಸೇನೆ ಘಟಕ ಶನಿವಾರ ಎಚ್ಚರಿಕೆ ನೀಡಿದೆ. “ಎಎನ್ಐ’ ಸುದ್ದಿ ಸಂಸ್ಥೆ ಜತೆಗೆ ಮಾತನಾಡಿದ ಶಿವಸೇನೆ ನಾಯಕ ಪೆರಿಂಗಮ್ಮಲ ಅಜಿ, “ಅ.17, 18ರಂದು ಪಕ್ಷದ ಮಹಿಳಾ ಘಟಕದ ಸದಸ್ಯರು ಪಂಪಾ ನದಿಯನ್ನು ಸುತ್ತುವರಿಯಲಿದ್ದಾರೆ. ದೇಗುಲ ಪ್ರವೇಶಕ್ಕೆ ಮಹಿಳೆಯರು ಪ್ರವೇಶಿಸಿದರೆ ಸದಸ್ಯರು ಆತ್ಮಹತ್ಯೆ ಮಾಡಿಕೊಳ್ಳಲಿದ್ದಾರೆ’ ಎಂದಿದ್ದಾರೆ ಮತ್ತೂಂದೆಡೆ ಸೆ.28ರಂದು ಘೋಷಣೆ ಮಾಡಿದ್ದಂತೆ ಹೋರಾಟಗಾರ್ತಿ ತೃಪ್ತಿ ದೇಸಾಯಿ ಶಬರಿಮಲೆ ದೇಗುಲಕ್ಕೆ ಭೇಟಿ ನೀಡುವ ಮಾತುಗಳನ್ನಾಡಿರುವುದು ಕೂಡ ಕೇರಳ ಸರ್ಕಾರಕ್ಕೆ, ದೇಗುಲದ ಆವರಣ ಮತ್ತು ಪಟ್ಟಣಂತಿಟ್ಟ ಜಿಲ್ಲೆಯಲ್ಲಿ ಬಂದೋಬಸ್ತ್ ಬಿಗಿಗೊಳಿಸುವ ಅನಿವಾರ್ಯತೆ ಒದಗಿ ಬಂದಿದೆ.
ದೇಗುಲ ಪ್ರವೇಶ ಮಾಡಬೇಕೆಂಬ ಆತುರದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾದರೆ ದೂರಬೇಡಿ ಎಂದು ದೇವಸ್ವಂ ಬೋರ್ಡ್ ಮಾಜಿ ಅಧ್ಯಕ್ಷ ಪ್ರಯಾರ್ ಗೋಪಾಲಕೃಷ್ಣನ್ ಹೇಳಿದ್ದಾರೆ. ಎಲ್ಲಾ ವಯಸ್ಸಿನ ಮಹಿಳೆಯರಿಗೆ ದೇಗುಲ ಪ್ರವೇಶಕ್ಕೆ ಅನುಮತಿ ನೀಡಿರುವುದು “ಶಬರಿಮಲೆಯನ್ನು ಥಾಯ್ಲೆಂಡ್ ಆಗಿ ಪರಿವರ್ತಿಸುವ ಕ್ರಮವಾಗಿದೆ’ ಎಂದು ಅವರು ಬಣ್ಣಿಸಿದ್ದಾರೆ. ಮಹಿಳೆಯರು ದೇಗುಲ ಪ್ರವೇಶಿಸುವುದಿದ್ದರೆ ಪ್ರವೇಶಿಸಲಿ. ಅಂಥ ಪ್ರಯತ್ನ ಮಾಡಬಾರದು ಎನ್ನುವುದು ಮನವಿ. ಒಂದು ವೇಳೆ ಬಂದರೆ ಹುಲಿ ಅಥವಾ ಮನುಷ್ಯನಿಂದ ಹಿಡಿಯಲ್ಪಡಲಿದ್ದಾರೆ’ ಎಂದು ಹೇಳುವ ಮೂಲಕ ಕಿರುಕುಳಕ್ಕೆ ಒಳಗಾದರೆ ಆಕ್ಷೇಪವೆತ್ತಬೇಡಿ ಎಂದು ಹೇಳಿದ್ದಾರೆ.