Advertisement

ಮಂಗಳೂರು ಗಲಭೆಯ ದೃಶ್ಯಾವಳಿಯನ್ನು ಸರಕಾರವೇ ಬಿಡುಗಡೆಗೊಳಿಸಬೇಕು: ಎಸ್. ಎಲ್ .ಭೋಜೇಗೌಡ

10:02 AM Jan 12, 2020 | keerthan |

ಬೆಂಗಳೂರು: ಕಳೆದ ವರ್ಷಾಂತ್ಯಕ್ಕೆ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಬೆಳಿಗ್ಗೆ 9ರಿಂದ ಗೋಲಿಬಾರ್ ನಡೆಯುವವರೆಗೆ ನಡೆದ ಎಲ್ಲ ವಿದ್ಯಮಾನಗಳ ದೃಶ್ಯಾವಳಿಗಳನ್ನು ಸರ್ಕಾರ ತಕ್ಷಣವೇ ಅಧಿಕೃತವಾಗಿ ಬಿಡುಗಡೆ ಮಾಡಬೇಕೆಂದು ವಿಧಾನ ಪರಿಷತ್ ಸದಸ್ಯ ಎಸ್. ಎಲ್. ಭೋಜೇಗೌಡ ಆಗ್ರಹಿಸಿದ್ದಾರೆ.

Advertisement

ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿರುವ ಸಿಡಿ ಕಟ್ ಅಂಡ್ ಪೇಸ್ಟ್ ಎಂದು ಮುಖ್ಯಮಂತ್ರಿ ಹೇಳಿರುವುದನ್ನು ಭೋಜೇಗೌಡ ತೀವ್ರವಾಗಿ ಖಂಡಿಸಿದ್ದಾರೆ.

ಮಂಗಳೂರಿನಲ್ಲಿ ಗೋಲಿಬಾರ್ ದಿನ ನಡೆದ ಬೆಳಗ್ಗೆ 9ರಿಂದ ಸಂಜೆ ತನಕದ  ಸಿಸಿಟಿವಿ ದೃಶ್ಯಾವಳಿಗಳನ್ನು ಮಂಗಳೂರು ಪೊಲೀಸ್ ಕಮಿಷನರ್  ಹಾಗೂ ರಾಜ್ಯ ಸರ್ಕಾರ ತಕ್ಷಣ ಬಿಡುಗಡೆ ಮಾಡಲಿ. ಸತ್ಯಾಸತ್ಯತೆ ಬಯಲಾಗುತ್ತದೆ ಎಂದು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next