Advertisement

ಆತ್ಮಹತ್ಯೆ ಯತ್ನ: ಮಾಜಿ ಸಚಿವ ರಾಮದಾಸ್‌ ಖುಲಾಸೆ

01:45 AM Apr 02, 2019 | Team Udayavani |

ಬೆಂಗಳೂರು:ಆತ್ಮಹತ್ಯೆ ಯತ್ನ ಆರೋಪ ಪ್ರಕರಣದಲ್ಲಿ ಮಾಜಿ ಸಚಿವ ಎಸ್‌.ಎ ರಾಮದಾಸ್‌ ಅವರನ್ನು ಖುಲಾಸೆಗೊಳಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ನೀಡಿದೆ.

Advertisement

2014ರಲ್ಲಿ ರಾಮದಾಸ್‌ ಆತ್ಮಹತ್ಯೆಗೆ ಯತ್ನಿಸಿದ ಆರೋಪ ಸಂಬಂಧ ಅವರ ವಿರುದ್ಧ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿರುವ ಜನಪ್ರತಿನಿಧಿಗಳ ನ್ಯಾಯಾಲಯ, ರಾಮದಾಸ್‌ ಅವರನ್ನು ದೋಷಮುಕ್ತಗೊಳಿಸಿ ಆದೇಶ ನೀಡಿದೆ.

ರಾಮ್‌ದಾಸ್‌ ಅವರು ತಮ್ಮನ್ನು ಪ್ರೀತಿಸಿ ವಂಚಿಸಿದ್ದಾರೆ ಎಂದು ಪ್ರೇಮ ಕುಮಾರಿ ಎಂಬುವವರು 2014ರಲ್ಲಿ ಇವರ ವಿರುದ್ಧ ಆರೋಪಿಸಿದ್ದರು. ಇದರಿಂದ ನೊಂದ ರಾಮ್‌ದಾಸ್‌ 2014 ಫೆ.11ರಂದು ಆತ್ಮಹತ್ಯೆಗೆ ಯತ್ನಿಸಿದ್ದರು. ಆತ್ಮಹತ್ಯೆಗೆ ಯತ್ನಿಸಿದ ಹಿನ್ನೆಲೆಯಲ್ಲಿ ರಾಮದಾಸ್‌ ವಿರುದ್ಧ ಮೈಸೂರಿನ ಕುವೆಂಪುನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next