Advertisement

ನಿಯೋಗದ ಜತೆ ಆರ್‌.ವಿ.ದೇಶಪಾಂಡೆ ಚರ್ಚೆ 

06:05 AM Dec 01, 2018 | Team Udayavani |

ಬೆಂಗಳೂರು: ಕರ್ನಾಟಕ ಮತ್ತು ಅಮೆರಿಕ ನಡುವಿನ ವಾಣಿಜ್ಯ ಸಂಬಂಧ ಬಲವರ್ಧನೆ ಹಾಗೂ ಕೌಶಲ್ಯ ಮರುಪೂರಣೆ ಕುರಿತು ಇಂಡೋ  ಅಮೆರಿಕನ್‌ ಚೇಂಬರ್‌ ಆಫ್ ಕಾಮರ್ಸ್‌ ನಿಯೋಗದ ಜತೆ ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಸಚಿವ ಆರ್‌.ವಿ.ದೇಶಪಾಂಡೆ ಶುಕ್ರವಾರ ಸಮಾಲೋಚನೆ ನಡೆಸಿದರು.

Advertisement

ವಿಧಾನಸೌಧ ಸಮಿತಿ ಕೊಠಡಿಯಲ್ಲಿ ನಡೆದ ಸಭೆಯಲ್ಲಿ ರಾಜ್ಯದ ದ್ವಿತೀಯ ಹಾಗೂ ತೃತೀಯ ಸ್ತರದ ನಗರಗಳಲ್ಲಿ ಜಾಗತಿಕ ವಾಣಿಜ್ಯ ಪರಿಸ್ಥಿತಿ ಪರಿಗಣಿಸಿ ಕೌಶಲ್ಯ ಅಭಿವೃದಿಟಛಿ ಕಾರ್ಯಕ್ರಮಗಳನ್ನು ಹೇಗೆ ರೂಪಿಸಬೇಕು ಎನ್ನುವ ಅಂಶದ ಬಗ್ಗೆ ಚರ್ಚಿಸಲಾಯಿತು. ಮರು ಕೌಶಲ್ಯ, ವೃತ್ತಿ ಜೀವನದ ಮಧ್ಯ ಭಾಗದಲ್ಲಿ ಕೊಡಬೇಕಾದ ತರಬೇತಿ ಮತ್ತು ಸಮುದಾಯ ಆಧಾರಿತ ಕೌಶಲ್ಯ ಡಿಪ್ಲೊಮಾ ಇವುಗಳಿಗೆ ಸಂಬಂಧಿಸಿದಂತೆ ಅಮೆರಿಕದ ಜತೆ ಹೊಂದಬಹುದಾದ ಸಹಕಾರ ಮತ್ತು ಆ ದೇಶದ ಕಾಲೇಜುಗಳ ಜತೆ ಸಹಭಾಗಿತ್ವ ಸ್ಥಾಪಿಸಿಕೊಳ್ಳುವ ಕುರಿತು ವಿಚಾರ ವಿನಿಮಯ ನಡೆಸಲಾಯಿತು. ಬಳಿಕ ಮಾತನಾಡಿದ ಸಚಿವ ಆರ್‌.ವಿ.ದೇಶಪಾಂಡೆ, ಕರ್ನಾಟಕದಲ್ಲಿ ಉದ್ಯಮಶೀಲನೆ ಮತ್ತು ನವೋದ್ಯಮ ಸ್ಥಾಪನೆಗೆ ತಕ್ಕದಾದ ವಾತಾವರಣವಿದ್ದು ಅದನ್ನು ಮತ್ತಷ್ಟು ಸುಧಾರಿಸಲಾಗುವುದು ಎಂದು ಹೇಳಿದರು. ಸಭೆಯಲ್ಲಿ ಸರ್ಕಾರದ ಕಾರ್ಯದರ್ಶಿ ಎ.ಎ.ಬಿಸ್ವಾಸ್‌, ಡಾ.ಗುರುಚರಣ್‌ ಮತ್ತಿತರರಿದ್ದರು.

ಅಮೆರಿಕ ಚೇಂಬರ್‌ ಆಫ್ ಕಾಮರ್ಸ್‌ ಜತೆ ಮಾಡಿಕೊಳ್ಳಬೇಕಾದ ಒಪ್ಪಂದಗಳ ಕುರಿತು ತಂಡವು ನೀಲನಕ್ಷೆ ರೂಪಿಸಲಿದೆ. ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆಯಲು ನಮ್ಮ ವಿದ್ಯಾರ್ಥಿಗಳಿಗೆ ಅಗತ್ಯವಾದ ಕೌಶಲ್ಯಗಳನ್ನು ಒದಗಿಸಬೇಕಾಗಿದೆ. ಯುವ ಜನರು ವಿದೇಶಗಳಲ್ಲಿ ಉದ್ಯೋಗ ಪಡೆಯಲು ಹಾಗೂ ಉದ್ಯಮ ನಡೆಸಲು ಸೌಲಭ್ಯ ಸಿಗುವಂತಾಗಲು ಕ್ರಮ ಕೈಗೊಳ್ಳಬೇಕಾಗಿದೆ.
– ಆರ್‌.ವಿ.ದೇಶಪಾಂಡೆ, ಕಂದಾಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next