Advertisement

ಯುದ್ಧವನ್ನು ಕೊನೆಗೊಳಿಸಲು ಪುರಿ ಜಗನ್ನಾಥನಿಗೆ ರಷ್ಯಾ ಭಕ್ತರ ಮೊರೆ

03:07 PM Feb 25, 2022 | Team Udayavani |

ಪುರಿ : ಇಲ್ಲಿನ 12 ನೇ ಶತಮಾನದ ಜಗನ್ನಾಥನ ದೇಗುಲದಲ್ಲಿ ಉಕ್ರೇನ್ ಜೊತೆಗಿನ ಯುದ್ಧವನ್ನು ಕೊನೆಗೊಳಿಸಲು ಮತ್ತು ಶಾಂತಿಯ ಮರುಸ್ಥಾಪನೆಗಾಗಿ ರಷ್ಯಾದ ಭಕ್ತರು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

Advertisement

ಮಹಿಳೆ ಸೇರಿದಂತೆ ಮೂವರು ರಷ್ಯನ್ನರುಇಸ್ಕಾನ್ ಸದಸ್ಯರಾಗಿದ್ದು, ಶಾಂತಿ ನೆಲೆಸಲು ವಿಶೇಷ ಪ್ರಾರ್ಥನೆ ಮಾಡಿದ್ದಾರೆ.

ಅವರು ಗುರುವಾರ ಜಗನ್ನಾಥ ದೇವಾಲಯದ ಸನ್ನಿಧಿಯ ಸಿಂಹದ್ವಾರದಲ್ಲಿ ಕುಳಿತು ಉಕ್ರೇನ್ ಜನರ ರಕ್ಷಣೆಗಾಗಿ ಪೂಜೆ ಸಲ್ಲಿಸಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಪ್ರಾರ್ಥನೆಯ ಬಳಿಕ ದೇವಸ್ಥಾನದಲ್ಲಿ ಸಿದ್ಧಮಾಡಲಾಗಿದ್ದ ಮಹಾಪ್ರಸಾದವನ್ನು ಅವರಿಗೆ ನೀಡಲಾಯಿತು.

ಇದನ್ನೂ ಓದಿ: ಚೆರ್ನೋಬಿಲ್ ಪರಮಾಣು ಸ್ಥಾವರ ವಶಪಡಿಸಿಕೊಂಡ ರಷ್ಯಾ ಪಡೆಗಳು!

Advertisement

Udayavani is now on Telegram. Click here to join our channel and stay updated with the latest news.

Next