Advertisement

Yash ನೋಡಲು ಧಾವಂತ ; ಯುವಕನ ಕಾಲ ಮೇಲೆ ಹರಿದ ಬೆಂಗಾವಲು ಕಾರು

06:04 PM Feb 29, 2024 | Team Udayavani |

ಬಳ್ಳಾರಿ: ನಗರದ ಹೊರವಲಯದಲ್ಲಿ ಇರುವ ಬಾಲಾಜಿ ನಗರದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರನ್ನು ನೋಡಲು ಏಕಕಾಲದಲ್ಲಿ ನೂರಾರು ಜನರು ಮುಗಿಬಿದ್ದ ವೇಳೆ, ಧಾವಂತದಲ್ಲಿದ್ದ ಯುವಕನೊಬ್ಬನ ಕಾಲು ಬೆಂಗಾವಲು ಕಾರಿನ ಚಕ್ರದಡಿಯಲ್ಲಿ ಸಿಲುಕಿ ಗಾಯಗೊಂಡ ಘಟನೆ ಗುರುವಾರ ನಡೆದಿದೆ.

Advertisement

ಬಾಲಾಜಿ ನಗರದಲ್ಲಿ ನೂತನವಾಗಿ ನಿರ್ಮಾಣವಾದ ಅಮೃತೇಶ್ವರ ಸ್ಪಟಿಕ ಲಿಂಗ ದೇವಸ್ಥಾನದ ಉದ್ಘಾಟನೆಗೆಂದು ಯಶ್ ಅವರು ಬಂದಿದ್ದರು.ಈ ವೇಳೆ ಯಶ್ ಅವರನ್ನು ಕಾಣಲೆಂದು ಸಾವಿರಾರು ಅಭಿಮಾನಿಗಳು ಏಕಕಾಲದಲ್ಲಿ ಆಗಮಿಸಿ ಯಶ್ ಅವರು ತೆರಳುತ್ತಿದ್ದ ಕಾರನ್ನು ಹಿಂಬಾಲಿಸಿದ್ದಾರೆ.

ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಪಟ್ಟಣದ ವಸಂತ ಎಂಬ ಯುವಕನ ಕಾಲಿನ ಮೇಲೆ ಯಶ್ ಬೆಂಗಾವಲು ವಾಹನ ಹರಿದಿದೆ. ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ನೀಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next