Advertisement

ಮಕ್ಕಳ ಕಳ್ಳರ ವದಂತಿ: ಜಾಗೃತಿಗೆ ಸಿಎಂ ಸೂಚನೆ

06:40 AM May 27, 2018 | Team Udayavani |

ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಮಕ್ಕಳ ಬಗ್ಗೆ ಹರಿದಾಡುತ್ತಿರುವ
ವದಂತಿಗಳಿಂದ ಜನರಲ್ಲಿ ಮೂಡಿರುವ ಆತಂಕ ದೂರ ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ
ಎಚ್‌.ಡಿ. ಕುಮಾರಸ್ವಾಮಿ ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Advertisement

ಮಕ್ಕಳ ಕಳ್ಳರ ಬಗ್ಗೆ ಆತಂಕದಲ್ಲಿರುವ ಸಾರ್ವಜನಿಕರು ಅಪರಿಚಿತರನ್ನು ಮಕ್ಕಳ ಕಳ್ಳರು ಎಂದು ಭಾವಿಸಿ ಮಾರಣಾಂತಿಕ ಹಲ್ಲೆ ನಡೆಸುತ್ತಿರುವುದು ರಾಜ್ಯದ ವಿವಿಧೆಡೆ ವರದಿಯಾಗಿದೆ.

ಇದು ತೀರಾ ಆತಂಕಕಾರಿ ಬೆಳವಣಿಗೆ. ಪೊಲೀಸ್‌ ಇಲಾಖೆ ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು
ಅವಶ್ಯಕ ಎಂದು ನಿರ್ದೇಶನ ನೀಡಿದ್ದಾರೆ. ಈ ಕುರಿತು ಶನಿವಾರ ಡಿಜಿಪಿ ಸೇರಿ ರಾಜ್ಯದ ಹಿರಿಯ ಪೊಲೀಸ್‌
ಅಧಿಕಾರಿಗಳ ಜತೆ ಚರ್ಚಿಸಿದ ಅವರು, ಮಕ್ಕಳ ಕಳ್ಳರ ವದಂತಿಯಿಂದ ಉಂಟಾಗಿರುವ ಆತಂಕ ಸಾರ್ವಜನಿಕ
ವಲಯದಲ್ಲಿ ದೂರ ಮಾಡಬೇಕು. ಆ ನಿಟ್ಟಿನಲ್ಲಿ ಪೊಲೀಸ್‌ ಠಾಣೆ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದರು.

Advertisement

Udayavani is now on Telegram. Click here to join our channel and stay updated with the latest news.

Next